ಸವದಿ ಸ್ಪರ್ಧೆಗೆ ಪಟ್ಟು ಹಿಡಿದ ಬಿಜೆಪಿ ಕಾರ್ಯಕರ್ತರು: ಕುಮಟಳ್ಳಿ ನಿಂತರೆ ಮತ ಬಹಿಷ್ಕಾರದ ಎಚ್ಚರಿಕೆ

Update: 2019-11-17 14:23 GMT

ಬೆಳಗಾವಿ, ನ.17: ಉಪಚುನಾವಣೆ ಸಂಬಂಧ ಅಥಣಿ ವಿಧಾನಸಭಾ ಕ್ಷೇತ್ರದ ಮಹೇಶ್ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾದರೂ, ಸ್ಥಳೀಯರ ಕಾರ್ಯಕರ್ತರು ಮಾತ್ರ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ಪರ್ಧೆಗೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ರವಿವಾರ ನಗರದಲ್ಲಿ ಚುನಾವಣೆ ಸಂಬಂಧ ಬಿಜೆಪಿ ಪೂರ್ವಭಾವಿ ಸಭೆ ಬಳಿಕ ಲಕ್ಷ್ಮಣ್ ಸವದಿ ಮನೆ ಮುಂಭಾಗ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಮಹೇಶ್ ಕುಮಟಳ್ಳಿ ಅವರನ್ನು ಒಪ್ಪಲು ಸಾಧ್ಯವಿಲ್ಲ. ನಮಗೆ ನೀವೇ ಬೇಕೆಂದು ಘೋಷಣೆ ಕೂಗಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಹೇಶ್ ಕುಮಟಳ್ಳಿಗೆ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಬಾರದು. ಅಷ್ಟೇ ಅಲ್ಲದೆ, ಮತ ಬಹಿಷ್ಕಾರಕ್ಕೆ ಮುಂದಾಗುವುದಾಗಿ ಕಾರ್ಯಕರ್ತರು ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News