ಮೈಸೂರು: ಲಾರಿ ಢಿಕ್ಕಿ; ಪಾದಚಾರಿ ಮೃತ್ಯು

Update: 2019-11-20 16:33 GMT

ಮೈಸೂರು,ನ.20: ರಸ್ತೆ ದಾಟುತಿದ್ದ ಪಾದಚಾರಿಗೆ ಲಾರಿಯೊಂದು ಢಿಕ್ಕಿ ಹೊಡದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಮೈಸೂರು-ನಂಜನಗೂಡು ರಸ್ತೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದ ಶಿವಸ್ವಾಮಿ(55) ಎಂದು ಗುರುತಿಸಲಾಗಿದೆ.

ನಂಜನಗೂಡಿನಿಂದ ಮೈಸೂರಿಗೆ ಬರುತಿದ್ದ ಶಿವಸ್ವಾಮಿ ಕಡಕೊಳ ಬಳಿಯ ಚೆಸ್ಕಾಂ ಸಂಕೀರ್ಣದ ಎದುರು ಮಧ್ಯಾಹ್ನ 1.30 ಗಂಟೆ ಸಮಯದಲ್ಲಿ ತನ್ನ ಸ್ಕೂಟರ್‍ಅನ್ನು ಪಕ್ಕದಲ್ಲಿ ನಿಲ್ಲಿಸಿ ರಸ್ತೆ ದಾಟಿ ಚೆಸ್ಕಾಂ ಸಂಕೀರ್ಣದ ಕಡೆಗೆ ಹೋಗಿ ಮತೆ ರಸ್ತೆ ದಾಟುತಿದ್ದ ವೇಳೆ ನಂಜನಗೂಡಿನಿಂದ ಮೈಸೂರು ಕಡೆಗೆ ಬರುತಿದ್ದ ಆಂಧ್ರ ಮೂಲದ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟಿದ್ದಾರೆ.

ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News