ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ: ಡಾ.ಉಪೇಂದ್ರ ಶಣೈ

Update: 2019-11-21 15:10 GMT

ಮೈಸೂರು,ನ.21: ಹಲ್ಲೆಗೆ ಒಳಗಾಗಿದ್ದ ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೂ ಕಿವಿಯಲ್ಲಿ ಸ್ವಲ್ಪ ತೊಂದರೆ ಇದೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯಕೀಯ ಮುಖ್ಯಸ್ಥ ಡಾ.ಉಪೆಂದ್ರ ಶಣೈ ಮತ್ತು ಡಾ.ದತ್ತಾತ್ರೇಯ ಮಾಹಿತಿ ನೀಡಿದರು.

ನರ ಕಟ್ ಆದ ಹಿನ್ನೆಲೆ ಕಿವಿಯ ಸಣ್ಣ ತುಂಡಿಗೆ ಹೊಲಿಗೆ ಹಾಕಿದ್ದೆವು, ಆದರೆ ಅದು ಸರಿ ಹೋಗದ ಕಾರಣ ಆಪರೇಷನ್ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿದ ಜಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದೇವೆ ಎಂದು ಡಾ. ಉಪೇಂದ್ರ ಶೆಣೈ ಹೇಳಿದರು.

ಮತ್ತೊಬ್ಬ ವೈದ್ಯ ದತ್ತಾತ್ರೇಯ ಮಾತನಾಡಿ, ಕತ್ತಿನ ಭಾಗ ಊದಿಕೊಂಡಿರುವುದರಿಂದ ಜೋರಾಗಿ ಮಾತನಾಡಲು ಆಗುತ್ತಿಲ್ಲ. ತುಟಿಗೆ ಸೇರಿದ ನರ ಕಟ್ ಆಗಿರುವುದರಿಂದ ಮಾತನಾಡುವಾಗ ತುಟಿಯು ಓರೆಯಾಗಿ ಕಾಣಿಸುತ್ತದೆ. ಆದ್ದರಿಂದ ಯಾವುದೇ ತೊಂದರೆ ಇಲ್ಲ, ಇದು ದೀರ್ಘಕಾಲ ಉಳಿಯುತ್ತದೆ. ಆಸ್ಪತ್ರೆಯಲ್ಲಿ 4-5 ದಿನ ಇರಬೇಕು ನಂತರ ಕೆಲವು ವಾರ ವಿಶ್ರಾಂತಿ ಪಡೆಯಬೇಕು ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News