ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಟೀಕೆ

Update: 2019-11-22 13:58 GMT

ಬೆಂಗಳೂರು, ನ.22: 'ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದು ನೋಡಿದರೆ, ನನ್ನನ್ನು ಅತಿ ಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡುತ್ತೇವೆ ಎಂದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಭರವಸೆ ನೀಡಿದ ಹಾಗಿದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ, ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಅಯ್ಯೋ ಸಿದ್ದರಾಮಯ್ಯನವರೇ ನಿಮ್ಮ ದುರಹಂಕಾರನ ವಿರೋಧಿಸಿದರೆ ಟಾರ್ಗೆಟ್ ಅಂತೀರಾ, ನಿಮ್ಮ ನಡೆಯನ್ನು ವಿರೋಧಿಸಿದರೆ ಭಯ ಅಂತೀರಾ. ದಿನದ 24 ಗಂಟೆನೂ ಮೋದಿ, ಬಿಜೆಪಿ ಅಂತಾನೇ ದಿನ ಶುರು ಮಾಡುತ್ತೀರಲ್ಲ, ನಿಮಗೂ ಬಿಜೆಪಿ ಅಂದರೆ ಭಯನಾ? ಅಥವಾ ನೀವು ಏಕವಚನದಲ್ಲಿ ಟೀಕಿಸಿದರೆ ನಿಮ್ಮ ಹೈಕಮಾಂಡ್ ಭಾರತ ರತ್ನಕ್ಕೆ ಶಿಫಾರಸ್ಸು ಮಾಡುತ್ತಾರಾ? ಎಂದು ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News