ಕೆಎಸ್ಸಾರ್ಟಿಸಿ: ವಿರಾಜಪೇಟೆ, ಮಡಿಕೇರಿಗೆ ಐರಾವತ ಕ್ಲಬ್‌ ಕ್ಲಾಸ್ ಬಸ್ ಸಂಚಾರ

Update: 2019-11-22 17:47 GMT

ಬೆಂಗಳೂರು, ನ.22: ಕೆಎಸ್ಸಾರ್ಟಿಸಿ ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು-ವಿರಾಜಪೇಟೆ, ಬೆಂಗಳೂರು-ಮಡಿಕೇರಿ ಮಾರ್ಗಗಳಲ್ಲಿ ಐರಾವತ ಕ್ಲಬ್ ಸಾರಿಗೆ ಬಸ್‌ಗಳನ್ನು ಹೊಸದಾಗಿ ಆರಂಭಿಸಲಾಗಿದೆ. ಬೆಂಗಳೂರಿನಿಂದ ವಿರಾಜಪೇಟೆಗೆ ಪ್ರತಿದಿನ ಬೆಂಗಳೂರಿನಿಂದ ಸಂಜೆ 3.30ಕ್ಕೆ ಹೊರಟು ರಾತ್ರಿ ರಾತ್ರಿ 9.45ಕ್ಕೆ ತಲುಪಲಿದೆ. ಹಾಗೆಯೇ ವಿರಾಜಪೇಟೆಯಿಂದ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ಬೆಂಗಳೂರಿಗೆ ತಲುಪಲಿದೆ. ಟಿಕೆಟ್ ದರ ಒಬ್ಬರಿಗೆ 530 ರೂ. ಇದೆ.

ಬೆಂಗಳೂರಿನಿಂದ ಮಡಿಕೇರಿಗೆ ಬೆಳಗ್ಗೆ 5.30ಕ್ಕೆ ಹೊರಟು ಮಧ್ಯಾಹ್ನ 12ಕ್ಕೆ ತಲುಪಲಿದೆ. ಹಾಗೆಯೇ ಮಡಿಕೇರಿಯಿಂದ ಮಧ್ಯಾಹ್ನ 2.30ಕ್ಕೆ ಹೊರಟು ರಾತ್ರಿ 8.30ಕ್ಕೆ ಬೆಂಗಳೂರಿಗೆ ತಲುಪಲಿದೆ. ಟಿಕೆಟ್ ದರ ಒಬ್ಬರಿಗೆ 530 ರೂ.ಇದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News