ಶಾಸಕ ತನ್ವೀರ್ ಸೇಠ್ ಭೇಟಿಗೆ ಅಭಿಮಾನಿಗಳಿಗೆ ಅವಕಾಶ

Update: 2019-11-23 09:12 GMT

ಮೈಸೂರು: ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಭೇಟಿಯಾಗಲು ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ಆರು ದಿನಗಳಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡುತ್ತಿರವ ನೆಚ್ಚಿನ ನಾಯಕನನ್ನು ನೋಡಲು  ಅಭಿಮಾನಿಗಳು ಕಾಂಗ್ರೆಸ್ ಕಾರ್ಯರ್ತರು ಆಸ್ಪತ್ರಗೆ ಬಂದು ತಮ್ಮ ನೆಚ್ವಿನ ನಾಯಕನ ದರ್ಶನ ಇಲ್ಲದೆ ವಾಪಸ್ ಹೋಗುತ್ತಿದ್ದರು. ಅವರಿಗೆ ನಿರಾಶೆ ಆಗಬಾರದು ಎಂಬ ಉದ್ದೇಶದಿಂದ ಶನಿವಾರ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಎರಡು ದಿನಗಳವರೆಗೆ ತನ್ವೀರ್ ಸೇಠ್ ಅವರು ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯಲಿದ್ದಾರೆ. ಅವರನ್ನು ಐಸಿಯು ನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದು, ಗಣ್ಯವಕ್ತಿಗಳಿಗಷ್ಟೆ ಅವಕಾಶ ನೀಡಲಾಗುತ್ತಿತ್ತು. ಇದೀಗ ಅಭಿಮಾನಿಗಳಿಗೂ ಅವಕಾಶ ನೀಡಲಾಗಿದೆ.

ತನ್ವೀರ್ ಸೇಠ್ ಅವರು ಇರವ ವಾರ್ಡ್ ಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ತನ್ವೀರ್ ಸೇಠ್ ಅವರನ್ನು ನೋಡಲು ಬರುವವರನ್ನು ತಪಾಸಣೆ ಮಾಡಿ ಒಳಬಿಡಲಾಗಯತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News