‘ಮಹಾ’ ಪ್ರತಿಜ್ಞೆ...

Update: 2019-11-25 18:14 GMT

ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅಧಿಕಾರ ಸ್ವೀಕರಿಸಿದ ಬಳಿಕ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಕಾಣುತ್ತಿರುವ ಮಹಾರಾಷ್ಟ್ರ ರಾಜಕೀಯ ಡ್ರಾಮಾ ಸೋಮವಾರ ಕ್ಲೈಮ್ಯಾಕ್ಸ್‌ಗೆ ತಲುಪಿದೆ. ಮುಂಬೈನ ಹೊಟೇಲ್ ಗ್ರಾಂಡ್ ಹಯಾತ್‌ನಲ್ಲಿ ತಮ್ಮ ಬಲಪ್ರದರ್ಶನ ಸಂದರ್ಭದಲ್ಲಿ ಶಿವಸೇನೆ-ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಶಾಸಕರು, ಮೈತ್ರಿಕೂಟಕ್ಕೆ ನಿಷ್ಠೆಯನ್ನು ಘೋಷಿಸಿ ಪ್ರತಿಜ್ಞೆಯನ್ನು ಕೂಡಾ ಮಾಡಿದ್ದಾರೆ. ‘‘ನನ್ನ ಪಕ್ಷಕ್ಕೆ ನಿಷ್ಠನಾಗಿರುವುದಾಗಿ ಶರದ್‌ಪವಾರ್, ಉದ್ಧವ್ ಹಾಗೂ ಸೋನಿಯಾಗಾಂಧಿ ಅವರ ನಾಯಕತ್ವದಲ್ಲಿ ನಾನು ಪ್ರತಿಜ್ಞೆ ಮಾಡುತ್ತೇನೆ. ಯಾವುದೇ ಆಮಿಷಗಳಿಗೆ ನಾನು ಒಳಗಾಗುವುದಿಲ್ಲ. ಬಿಜೆಪಿಗೆ ಪ್ರಯೋಜನಕಾರಿಯಾಗುವ ಯಾವುದೇ ಕೃತ್ಯವನ್ನು ನಾನು ಎಸಗಲಾರೆ’’ ಎಂದು ಮೈತ್ರಿಕೂಟದ ಶಾಸಕರು ಒಕ್ಕೊರಲಿನಿಂದ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor