ಪಕ್ಷಾಂತರಿಗಳನ್ನು ಜನ ಕ್ಷಮಿಸುವುದಿಲ್ಲ: ಈಶ್ವರ ಖಂಡ್ರೆ

Update: 2019-11-26 12:22 GMT

ಹುಬ್ಬಳ್ಳಿ, ನ.26: ಪಕ್ಷಾಂತರ ಮಾಡಿ ದ್ರೋಹ ಎಸಗಿದವರಿಗೆ ಜನರು ಕ್ಷಮಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಶಾಸಕರು ಪಕ್ಷಾಂತರಗೊಂಡು ತಮ್ಮ ಮಾತೃಪಕ್ಷಗಳಿಗೆ ದ್ರೋಹ ಎಸಗಿದ್ದಾರೆ. ಜನರು ಅವರನ್ನು ಕ್ಷಮಿಸುವುದಿಲ್ಲ ಎಂದರು.

ನಾನು ಕಾಗವಾಡ ಕ್ಷೇತ್ರದಲ್ಲಿ ರಾಜು ಕಾಗೆ ಪರ ಪ್ರಚಾರ ಮಾಡಿದ್ದೇನೆ. ವಿಧಾನಸಭಾ ಉಪಚುನಾವಣೆಯಲ್ಲಿ 15 ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಲೆ ಇದೆ. ಕಾಂಗ್ರೆಸ್ ಪರ ಜನಾದೇಶವನ್ನು ಮತದಾರ ಪ್ರಭುಗಳೇ ಸಾದರಪಡಿಸಲಿದ್ದಾರೆ ಎಂದ ಅವರು, ಬಿಜೆಪಿಯವರು ಅಧಿಕಾರಕ್ಕಾಗಿ ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆಂಬುದನ್ನು ಜನ ನೋಡುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News