ವಿಜಯಪುರ : ಬಾವಿಯಲ್ಲಿ ಯುವಕನ ಮೃತದೇಹ ಪತ್ತೆ

Update: 2019-11-28 08:29 GMT

ವಿಜಯಪುರ : ಬಾವಿಯೊಂದರಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಪೇಟಿ ಬಾವಡಿಯಲ್ಲಿ ನಡೆದಿದೆ.

ನಗರದ ಗಚ್ಚಿನ ಮಹಲ್ ಕಾಲನಿಯ ಕಾಸಿಮ್ ಖಾದ್ರಿ (30) ಮೃತರು ಎಂದು ಗುರುತಿಸಲಾಗಿದ್ದು, ಬಾವಿಯ ಸಮೀಪ ರಕ್ತದ ಕಲೆ, ಬಿಯರ್ ಬಾಟಲ್,  ಕಾಸಿಮ್ ಅವರ ಬೈಕ್  ಪತ್ತೆಯಾಗಿದೆ.

ಕಾಸಿಮ್ ರನ್ನು ಕೊಲೆಗೈದು ಬಾವಿಗೆ ಎಸೆದಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಗೋಳಗುಮ್ಮಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News