ಕುಮಾರಸ್ವಾಮಿಯ 'ಪತ್ರ ಕಣ್ಣೀರು' ಕುರಿತು ಅನರ್ಹ ಶಾಸಕ ನಾರಾಯಣಗೌಡ ಪ್ರತಿಕ್ರಿಯೆ

Update: 2019-11-28 16:58 GMT

ಮಂಡ್ಯ, ನ.28: ಭಗವಂತನ ಆಣೆಗೂ ಕುಮಾರಸ್ವಾಮಿ ಅವರಿಗೆ ನಾನು ಯಾವ ಪತ್ರವನ್ನೂ ಬರೆದಿಲ್ಲ ಎಂದು ಉಪಚುನಾವಣೆಯ ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹೇಳಿದ್ದಾರೆ.

ಜೆಡಿಎಸ್ ಸಮಾವೇಶದಲ್ಲಿ ಕುಮಾರಸ್ವಾಮಿ ತನಗೆ ನಾರಾಯಣಗೌಡ ಬರೆದಿದ್ದ ಪತ್ರ ಪ್ರಸ್ತಾಪಿಸಿದ ಬಗ್ಗೆ ಗುರುವಾರ ಸ್ಪಷ್ಟನೆ ನೀಡಿದ ನಾರಾಯಣಗೌಡ, ಅದು ಅವರೇ ಹುಟ್ಟುಹಾಕಿರೋ ಪತ್ರವೆಂದು ಆರೋಪಿಸಿದರು.

ಕುಮಾರಣ್ಣ ಬಂದು ಮತ ಕೇಳಲಿ, ಅವರ ಪಕ್ಷ ಬೆಳೆಸಲಿ ಅಭ್ಯಂತರ ಇಲ್ಲ. ಆದರೆ, ಅದನ್ನು ಬಿಟ್ಟು ಈ ರೀತಿ ಸುಳ್ಳು ಹೇಳೋದನ್ನು ನಿಲ್ಲಿಸಬೇಕು. ಅವರು ಸುಳ್ಳನ್ನು ಹೇಳಿ ಹೇಳಿ ಈ ರೀತಿ ಆಗಿದೆ. ಅದಕ್ಕಾಗಿಯೇ ನಾವು ಅವರನ್ನು ದೂರ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News