×
Ad

ಕಕ್ಷಿದಾರರಿಗೆ ವಕೀಲರು ಏಜೆಂಟರಾಗಿ ಸಾಕ್ಷ್ಯ ನುಡಿಯುವುದು ಸಲ್ಲ: ಹೈಕೋರ್ಟ್ ಆದೇಶ

Update: 2019-12-01 21:51 IST

ಬೆಂಗಳೂರು, ಡಿ.1: ಶತಮಾನಗಳಿಂದ ವೃತ್ತಿ ಮೌಲ್ಯ ಕಾಪಾಡಿಕೊಂಡು ತನ್ನದೆ ಆದ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ವೃದ್ಧಿಸಿಕೊಂಡು ಬೆಳೆದಿರುವ ವಕೀಲಿಕೆ ಅತ್ಯಂತ ಶ್ರೇಷ್ಠವಾದದ್ದು, ಇಂತಹ ವೃತ್ತಿಯ ಗೌರವವನ್ನು ಎತ್ತಿ ಹಿಡಿಯಬೇಕಾದ ವಕೀಲರು, ಯಾವ ಕಕ್ಷಿದಾರರ ಪರ ವಾದ ಮಂಡಿಸಿ ಆ ವ್ಯಾಜ್ಯದಿಂದ ನಿವೃತ್ತರಾಗಿರುತ್ತಾರೋ ಅದೇ ಪ್ರಕರಣದಲ್ಲಿ ಅದೇ ಕಕ್ಷಿದಾರರ ಏಜೆಂಟ್ ಆಗಿ ಕೋರ್ಟ್‌ಗೆ ಸಾಕ್ಷ್ಯ ನುಡಿಯುವುದು ಸಲ್ಲ ಎಂದು ಹೈಕೋರ್ಟ್ ಹೇಳಿದೆ.   

ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ನಗರದ 5ನೆ ಹೆಚ್ಚುವರಿ ಸಿವಿಲ್ ಕೋರ್ಟ್ ನೀಡಿದ ಆದೇಶ ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಈ ಮೊದಲು ನನ್ನ ಕಕ್ಷಿದಾರರ ಪರ ವಾದ ಮಂಡಿಸುತ್ತಿದ್ದೆ. ಈಗ ನಿವೃತ್ತನಾಗಿದ್ದೇನೆ. ಆದರೆ, ಇದೇ ಪ್ರಕರಣದಲ್ಲಿ ನನ್ನ ಕಕ್ಷಿದಾರರ ಪರ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕೆಂದು ಅರ್ಜಿದಾರರ ಮನವಿಯನ್ನು ನ್ಯಾಯಪೀಠ ನಿರ್ಬಂಧಿಸಿದೆ. ವಕೀಲರು ತಮ್ಮ ವೃತ್ತಿಯಲ್ಲಿ ಸಂಪೂರ್ಣ ನಿಷ್ಪಕ್ಷಪಾತದಿಂದ ನಡೆದುಕೊಳ್ಳಬೇಕು. ವಕೀಲರ ಸರ್ವೋತ್ಕೃಷ್ಟ ಕೆಲಸ ಎಂದರೆ ನ್ಯಾಯ ನಿರ್ವಹಣೆಯಲ್ಲಿ ಕಕ್ಷಿದಾರರ ಪರ ಕೋರ್ಟ್‌ಗೆ ಸಹರಿಸುವುದು ಮಾತ್ರವೇ ಆಗಿರುತ್ತದೆ. ಅದು ಬಿಟ್ಟು ಕಕ್ಷಿದಾರರ ಜೊತೆ ವೈಯಕ್ತಿಕವಾಗಿ ಗುರುತಿಸಿಕೊಳ್ಳುವದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News