‘ಈರುಳ್ಳಿ' ಮೂಲಕ ಕೇಂದ್ರ, ರಾಜ್ಯ ಸರಕಾರಗಳನ್ನು ಕುಟುಕಿದ ಸಿದ್ದರಾಮಯ್ಯ

Update: 2019-12-04 13:02 GMT

ಬೆಂಗಳೂರು, ಡಿ.4: ಈರುಳ್ಳಿ ಬೆಲೆ ಏರಿಕೆಗೆ ಅತೀವೃಷ್ಟಿ ಕಾರಣವಿರಬಹುದು, ಆದರೆ, ಇಂತಹ ಸಮಸ್ಯೆಯನ್ನು ನಿರೀಕ್ಷಿಸಿ ಬಳಕೆದಾರರ ಹಿತರಕ್ಷಣೆಗೆ ಕ್ರಮಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅಧಿಕಾರದಲ್ಲಿರುವವರ ಅಸಾಮರ್ಥ್ಯಕ್ಕೆ ಜನ ಕಣ್ಣೀರು ಸುರಿಸುವಂತಾಗಿದೆ. ಆಂತರಿಕ ಬಳಕೆಗೆ ಅಗತ್ಯವಿದ್ದಷ್ಟು ಈರುಳ್ಳಿ ಆಮದಿಗೆ ಕೇಂದ್ರ ಸರಕಾರ ತಕ್ಷಣ ಮುಂದಾಗಬೇಕಿತ್ತು ಎಂದು ತಿಳಿಸಿದ್ದಾರೆ.

ಕಾಳಸಂತೆಕೋರರ ಅಕ್ರಮ ದಾಸ್ತಾನು ವಿರುದ್ದ ರಾಜ್ಯ ಸರಕಾರ ಕ್ರಮಕೈಗೊಳಬೇಕಾಗಿತ್ತು. ಎರಡೂ ಸರಕಾರಗಳ ವೈಫಲ್ಯದಿಂದಾಗಿಯೇ ಬೆಲೆ ಏರಿಕೆ ಬಿಸಿಯಿಂದ ಜನ ಬೇಯುವಂತಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News