ರಸ್ತೆ ಅಪಘಾತ: ದಿನಪತ್ರಿಕೆಯ ಪ್ರಸರಣ ವಿಭಾಗದ ಉದ್ಯೋಗಿ ಸಾವು

Update: 2019-12-04 17:20 GMT

ಮೈಸೂರು,ಡಿ.4: ದಿನಪತ್ರಿಕೆಯೊಂದರ ಮೈಸೂರು ಬ್ಯೂರೋದ ಪ್ರಸರಣ ವಿಭಾಗದ ಉದ್ಯೋಗಿಯೋರ್ವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ನಂಜನಗೂಡಿನ ಕಪ್ಪಸೋಗೆ ಗ್ರಾಮದ ಶಿವಶಂಕರ್ ಎಂದು ಹೇಳಲಾಗಿದೆ. ಮಂಗಳವಾರ ಕೆಲಸ ಮುಗಿಸಿ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ನಂಜನಗೂಖಡು ರಸ್ತೆಯಲ್ಲಿ ವಾಹನ ನಿಯಂತ್ರಣ ಕಳೆದುಕೊಂಡ ಪರಿಣಾಮ ಮರಕ್ಕೆ ಗುದ್ದಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಶಂಕರ್ ವಿಜಯವಾಣಿ ಪತ್ರಿಕೆಯ ಪ್ರಸರಣ ವಿಭಾಗದಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿವಶಂಕರ್ ಅವರ ಸಾವಿಗೆ ವಿಆರ್‍ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಎಂ.ಡಿ. ಆನಂದ ಸಂಕೇಶ್ವರ ಹಾಗೂ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News