ಕೋಳಿವಾಡ ಮನೆ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ: ರೇಣುಕಾಚಾರ್ಯ

Update: 2019-12-04 17:41 GMT

ದಾವಣಗೆರೆ, ಡಿ.4: ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ ಪ್ರಕರಣ ರಾಜಕೀಯ ಪ್ರೇರಿತವಲ್ಲ, ಸೋಲಿನ ಭಯದಿಂದ ಕೋಳಿವಾಡ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಸ್ವತಂತ್ರ ಸಂಸ್ಥೆ. ಇಲಾಖೆಯು ಗೃಹ ಸಚಿವರ ಕೈಯಲ್ಲಿ ಇಲ್ಲ. ಕೋಳಿವಾಡ ಸೋಲಿನ ಹತಾಶೆಯಿಂದ ಹೀಗೆ ಮಾತನಾಡುತ್ತಾರೆ. ಸೋಲುವ ಭಯದಲ್ಲಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಣೆಬೆನ್ನೂರು ಬಂದಾಗ ಮತದಾರರಿಗೆ 500 - 1000 ರೂಪಾಯಿ ಹಣ ಹಂಚಿದ್ದರು. ನಾವು ದಾಳಿ ಮಾಡಿಸುವುದಾಗಿದ್ದರೆ ಆಗಲೇ ಮಾಡಿಸಬಹುದಿತ್ತು. ಕೋಳಿವಾಡ ಸುಮ್ಮನೆ ಆರೋಪ ಮಾಡಬಾರದು  ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News