ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ರಿಂದ ನೀತಿ ಸಂಹಿತೆ ಉಲ್ಲಂಘನೆ: ಆರೋಪ
Update: 2019-12-05 12:22 GMT
ಹೊಸಪೇಟೆ, ಡಿ.5: ಮತದಾನ ಬಹಿಷ್ಕರಿಸಿ ಮತಗಟ್ಟೆ ಬಳಿ ಪ್ರತಿಭಟನೆ ಮಾಡುತ್ತಿದ್ದ ಜನರ ಜೊತೆ ಮಾತನಾಡಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ತಹಶೀಲ್ದಾರ್ ಡಿ.ಜೆ.ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ ನಿಂಬಗಲ್ ರಾಮಕೃಷ್ಣ ಹಾಗೂ ಆಜಾದ್, ಮತದಾರರ ಜತೆ ಮಾತನಾಡಲು ಬಿಟ್ಟಿರುವುದು ತಪ್ಪು. ನೀವು ಬಿಜೆಪಿ ಏಜೆಂಟ್ರಂತೆ ವರ್ತಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು. ಬಿಜೆಪಿ ಅಭ್ಯರ್ಥಿ ಅನಂದ್ ಸಿಂಗ್ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ಕೊಡುತ್ತಿದ್ದಾರೆ, ಅದನ್ನು ತಡೆಯುವ ಬದಲು ತಹಶೀಲ್ದಾರ್ ಡಿ.ಜೆ.ಹೆಗಡೆ ದೂರದಲ್ಲಿ ನೀತು ನೋಡುತ್ತಿದ್ದಾರೆ ಎಂದು ದೂರಿದರು. ಚುನಾವಣಾ ಅಧಿಕಾರಿಗಳು ಬಂದು ಮಾತುಕತೆ ನಡೆಸಬೇಕು. ಯಾವ ಪಕ್ಷದ ಅಭ್ಯರ್ಥಿಯೂ ಬರಬಾರದು. ಇದು ನೇರಾನೇರ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ತಿಳಿಸಿದರು.