ಮಗನ ಸಾವಿನ ದುಃಖದಲ್ಲೂ ಮತ ಚಲಾಯಿಸಿದ ಕುಟುಂಬ

Update: 2019-12-05 15:46 GMT
ಸಾಂದರ್ಭಿಕ ಚಿತ್ರ

ಹಾವೇರಿ, ಡಿ.5: ಮಗ ಸಾವನ್ನಪ್ಪಿದ ಸೂತಕ ಮನೆಯನ್ನು ಆವರಿಸಿದ್ದರೂ, ಪ್ರಜಾಪ್ರಭುತ್ವದ ತಮ್ಮ ಹಕ್ಕು ಮರೆಯದೇ ಮನೆಯವರು ಮತದಾನ ಮಾಡಿರುವ ಘಟನೆ ರಟ್ಟಿಹಳ್ಳಿಯ ತೋಟಗಂಟಿ ಗ್ರಾಮದಲ್ಲಿ ನಡೆದಿದೆ.

ಲೋಹಿತ್ ಹಾಲೇಶ್ (21) ಬುಧವಾರ ಶಂಕಿತ ಡೆಂಗ್ ಜ್ವರದಿಂದ ಸಾವನ್ನಪ್ಪಿದ್ದರು. ಆದರೆ ಡಿ.4ರಂದು ಗುರುವಾರ ಹಿರೆಕೇರೂರು ಉಪಚುನಾವಣೆಯಿದ್ದು, ಮೃತನ ತಾಯಿ ರತ್ನಮ್ಮ, ತಂಗಿ ಮೀನಾಕ್ಷಿ ಮತ್ತು ಕುಟುಂಬಸ್ಥರು ಮತದಾನ ಮಾಡಿದ್ದಾರೆ. ಕ್ಷೇತ್ರಕ್ಕೆ ಉತ್ತಮ ನಾಯಕನ್ನು ಆರಿಸುವ ದೃಷ್ಟಿಯಲ್ಲಿ ದುಃಖದ ಮಡುವಿನಲ್ಲೂ ಮತಗಟ್ಟೆಗೆ ತೆರಳಿ, ತಮ್ಮ ಹಕ್ಕು ಚಲಾಯಿಸಿರುವ ಲೋಹಿತ್ ಅವರ ಕುಟುಂಬ ಪ್ರಶಂಸೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News