ಬಿಜೆಪಿ 13 ಅಲ್ಲ, 15ರಲ್ಲೂ ಗೆಲ್ಲಬೇಕು: ಡಿ.ಕೆ.ಶಿವಕುಮಾರ್ ವ್ಯಂಗ್ಯ

Update: 2019-12-08 14:28 GMT

ಬೆಂಗಳೂರು, ಡಿ.8: ಉಪ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನ ಗೆಲ್ಲುತ್ತಾರೆ ಎಂದು ಸಿಎಂ ಯಡಿಯೂರಪ್ಪ ಭ್ರಮೆಯಲ್ಲಿ ಹೇಳಿದ್ದಾರೆ. ಬಿಜೆಪಿ 15ಕ್ಕೆ 15ರಲ್ಲೂ ಗೆಲ್ಲುತ್ತಾರೆ. ಎರಡು ಕ್ಷೇತ್ರಗಳಲ್ಲಿ ಅವರಿಗೆ ಯಾಕೆ ಮೋಸ ಮಾಡಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನ ಗೆಲ್ಲುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಗೆಲ್ಲುತ್ತದೆ ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಅವರು ಯಾವ ಭ್ರಮೆಯಲ್ಲಿ ಹೇಳಿದ್ದಾರೋ ತಿಳಿದಿಲ್ಲ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ 15 ಗೆಲ್ಲುತ್ತೇವೆ ಅಂತಾ ತಾನೇ ನಿಲ್ಲಿಸಿರೋದು. ಗೆದ್ದ ಎಲ್ಲರನ್ನೂ ಮಂತ್ರಿ ಸ್ಥಾನದಲ್ಲಿ ಕೂರಿಸುತ್ತೇವೆ ಎಂದು ಹೇಳಿ ಟಿಕೆಟ್ ಕೊಟ್ಟು ನಿಲ್ಲಿಸಿರುವುದು. 13 ಜನರನ್ನು ಗೆಲ್ಲಿಸಿಕೊಂಡು ಇನ್ನಿಬ್ಬರಿಗೆ ಯಾಕೆ ರಾಜಕೀಯ ಭವಿಷ್ಯದಲ್ಲಿ ಮೋಸ ಮಾಡ್ತಾರೆ? ಮೊದಲೇ ಇಬ್ಬರಿಗೆ ವಂಚನೆಯಾಗಿದೆ. ಈಗ ಇನ್ನಿಬ್ಬರಿಗೆ ವಂಚನೆ ಯಾಕೆ? ಬಿಜೆಪಿ 15 ಗೆದ್ದೇ ಗೆಲ್ಲುತ್ತಾರೆ ಅಂತಾ ನಾನು ಅಂದುಕೊಂಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News