ಕೆಎಸ್ಆರ್ಟಿಸಿ ಬಸ್-ಸ್ಕೂಟರ್ ನಡುವೆ ಅಪಘಾತ: ತಂದೆ-ಮಗ ಸಾವು

Update: 2019-12-08 16:57 GMT

ಮೈಸೂರು,ಡಿ.8: ಕೆಎಸ್ಆರ್ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಅಪ್ಪ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ತಾಲೂಕಿನ ಕೋಟೆಹುಂಡಿ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಪ್ರಕಾಶ್ (50) ಸುರೇಶ್(23) ಮೃತಪಟ್ಟವರು. ಇವರು ಕಟ್ಟೆಹುಣಸೂರು ನಿವಾಸಿಗಳಾಗಿದ್ದು, ಮೈಸೂರಿನ ಜೆ.ಪಿ.ನಗರದ ಮಹದೇವುಪರದಲ್ಲಿ ವಾಸವಿದ್ದರು.

ಪ್ರಕಾಶ್ ಮತ್ತು ಸುರೇಶ್ ರೇಷನ್ ಅಕ್ಕಿಗಾಗಿ ಕಟ್ಟೆಹುಣಸೂರಿಗೆ ಡಿಯೋ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಕೆಎಸ್ಆರ್ಟಿಸಿ ಬಸ್ ಸ್ಕೂಟರ್ ಗೆ ಢಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News