ಬಿಸಿ ಸಾಂಬಾರ್ ಚೆಲ್ಲಿ ಮಹಿಳೆ ಸೇರಿ ಮೂವರು ಮಕ್ಕಳಿಗೆ ಗಾಯ

Update: 2019-12-11 12:56 GMT

ಬೆಳಗಾವಿ, ಡಿ. 11: ಇಲ್ಲಿನ ಖಾನಾಪುರ ತಾಲೂಕಿನ ಗೋಳಿಯಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನದ ಬಿಸಿಯೂಟ ಬಡಿಸುವ ವೇಳೆ ಬಿಸಿ ಸಾಂಬಾರ್ ಚೆಲ್ಲಿದ ಪರಿಣಾಮ ಮಹಿಳೆ ಸೇರಿ ಮೂವರು ಮಕ್ಕಳಿಗೆ ಗಂಭೀರ ಸುಟ್ಟಗಾಯಗಳಾಗಿರುವ ಪ್ರಕರಣ ನಡೆದಿದೆ.

ಅಂಗನವಾಡಿ ಕೇಂದ್ರದ ಆಯಾ ಲೀಲಾವತಿ(55), ಐದು ವರ್ಷದ ಸಂಜನಾ, ಸಾನ್ವಿ, ಸಮೀಕ್ಷಾ ಎಂಬ ಮಕ್ಕಳಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಾಹ್ನ ಬಿಸಿಯೂಟ ಬಡಿಸುವ ವೇಳೆ ಅಂಗನವಾಡಿ ಸಹಾಯಕಿ ಬಿಸಿ ಸಾಂಬಾರ್ ತುಂಬಿದ ಪಾತ್ರೆ ತರುವಾಗ ಕೈಜಾರಿ ಕೆಳಗೆ ಬಿದ್ದಿದೆ. ಹೀಗಾಗಿ ಆಯಾ ಅವರ ಎದೆ, ಕಾಲುಗಳಿಗೆ ತೀವ್ರ ಸ್ವರೂಪದ ಸುಟ್ಟಗಾಯಗಳಾಗಿವೆ. ಅಲ್ಲದೆ, ಮಕ್ಕಳಿಗೂ ಗಾಯಗಳಾಗಿವೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News