ಕರ್ಫ್ಯೂ ಬಲೆಯಲ್ಲಿ ಮಂಗಳೂರು
Update: 2019-12-20 17:25 GMT
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ ಮಂಗಳೂರು ವ್ಯಾಪ್ತಿಯಲ್ಲಿ ಡಿ.19 ರಿಂದ ಡಿ.22 ರವರೆಗೆ ಕರ್ಫ್ಯೂ ಘೋಷಿಸಲಾಗಿದೆ. ಕರ್ಫ್ಯೂ ಹಿನ್ನೆಲೆ ಮಂಗಳೂರು ಹಾಗೂ ತೊಕ್ಕೊಟು, ಕಲ್ಲಾಪು, ದೇರಳಕಟ್ಟೆ ಪ್ರದೇಶಗಳು ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು.