ಮಂಗಳೂರಲ್ಲಿ ಗಲಾಟೆ ಮಾಡಿದ್ದು ಸಿದ್ದರಾಮಯ್ಯ ಸೃಷ್ಟಿ ಮಾಡಿದ ಮರಿ ಟಿಪ್ಪುಗಳು: ಪ್ರತಾಪ್ ಸಿಂಹ
Update: 2019-12-24 15:37 GMT
ಮೈಸೂರು,ಡಿ.24: ಕಾಂಗ್ರೆಸ್ ಪಕ್ಷ ಕೊಚ್ಚೆಯಲ್ಲಿರುವ ಸೊಳ್ಳೆಯ ತರ, ಅಮಾಯಕರು ಅನಕ್ಷರಸ್ಥರನ್ನು ಇಟ್ಟುಕೊಂಡು ಮೊದಲಿನಿಂದಲೂ ರಾಜಕೀಯ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಗಲಾಟೆ ಮಾಡಿದವರು ಸಮಾಜಘಾತ ಶಕ್ತಿಗಳು, ಸಿದ್ದರಾಮಯ್ಯ ಸೃಷ್ಟಿ ಮಾಡಿರುವ ಮರಿ ಟಿಪ್ಪುಗಳು ಎಂದು ಹರಿಹಾಯ್ದರು.
ಮಂಗಳೂರಿನಲ್ಲಿ ಗಲಾಟೆ ಮಾಡಿದವರು ಯಾರು ಎಂಬ ಬಗ್ಗೆ ಸಿಸಿ ಕ್ಯಾಮೆರಾ ವಿಡಿಯೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅವರು ಅಮಾಯಕರು ಎಂದ ಸಿದ್ದರಾಮಯ್ಯ ಹಾಗೂ ಅವರನ್ನು ರಕ್ಷಣೆ ಮಾಡಲು ಹೋಗಿದ್ದ ರಮೇಶ್ ಕುಮಾರ್ ಈಗ ತಿಳಿದುಕೊಳ್ಳಲಿ. ಅವರ್ಯಾರು ಅಮಾಯಕರಲ್ಲ, ಮುಗ್ದರಲ್ಲ, ಆಟೋದಲ್ಲಿ ಕಲ್ಲು ತಂದು ಪೊಲೀಸರ ಮೇಲೆ, ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ದಾಳಿ ಮಾಡಿದ್ದಾರೆ. ಇವರೆಲ್ಲಾ ಸಿದ್ದರಾಮಯ್ಯ ಸೃಷ್ಟಿ ಮಾಡಿರುವ ಮರಿ ಟಿಪ್ಪುಗಳು ಎಂದು ದೂರಿದರು.