ಮುಂಡಗೋಡ: ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನಾ ಮೆರವಣಿಗೆ

Update: 2019-12-26 08:29 GMT

ಮುಂಡಗೋಡ, ಡಿ.26: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ(ಸಿ.ಎ.ಎ.) ವಿರೋಧಿಸಿ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಮುಂಡಗೋಡಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದವು.

ಬಳಿಕ ಎನ್‌ಆರ್‌ಸಿ, ಸಿಎಎ ಹಿಂಪಡೆಯುವಂತೆ ಒತ್ತಾಯಿಸಿ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
 
ಮನವಿ ಕೊಡುವ ಪೂರ್ವದಲ್ಲಿ ಬೆಳಗ್ಗೆ 10 ಗಂಟೆಗೆ ಖಾದರಲಿಂಗ್ ದರ್ಗಾ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರನ್ನುದ್ದೇಶಿಸಿ ಪ್ರಮುಖರಾದ ನೂರಾನಿ ಜಮಾಅತ್ ಅಧ್ಯಕ್ಷ ಮುಹಮ್ಮದ್ ಸಲೀಂ ನಂದಿಗಟ್ಟಿ, ಮುನಾಫ್ ಮಿರ್ಝಾನಕರ, ಎಂ.ಎನ್.ದುಂಡಶಿ, ಎಂ.ಕೆ.ಗಡವಾಲೆ ದಲಿತ ಸಂಘಟನೆಯ ಚಿದಾನಂದ ಹರಿಜನ್, ಭೀಮಣ್ಣ ಭೋವಿ ಎನ್.ಆರ್.ಸಿ. ಹಾಗೂ ಸಿ.ಎ.ಎ ವಿರೋಧಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಗೌಸ್ ಮುಹಿಯುದ್ದೀನ್ ಬೆಂಡಿಗೇರಿ, ನೂರ್ ಅಹ್ಮದ ಬೇಗ್, ಅನ್ವರ್ ಖಾನ್ ಪಠಾಣ್, ಐದು ಮಸೀದಿಗಳ ಪದಾಧಿಕಾರಿಗಳು, ಲತೀಫ್‌ ನಾಲಬಂದ, ಮುಹಮ್ಮದ್ ಗೌಸ್ ಅತ್ತಾರ, ಅಲೇ ಮುಸ್ತಫಾ ಬೆಂಡಿಗೇರಿ, ಮುಹಮ್ಮದ್ ಗೌಸ್ ಮಕಾನದಾರ, ಜಾಫರ್ ಹಂಡಿ, ರಝಾ ಪಠಾಣ್, ರಫೀಕ್ ಇನಾಮ್ದಾರ್, ರಫೀಕ್ ಮಿರ್ಝಾನಕರ, ಮುಹಮ್ಮದ್ ಹುಸೈನ್ ಶೇಖ್ ಹಾಗೂ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News