ದಾವಣಗೆರೆ: ಪೇಜಾವರ ಶ್ರೀಗಳ ನಿಧನಕ್ಕೆ ಎಸ್ಸೆಸ್-ಎಸ್ಸೆಸ್ಸೆಂ ಸಂತಾಪ

Update: 2019-12-29 17:59 GMT

ದಾವಣಗೆರೆ: ಅನಾರೋಗ್ಯದಿಂದ ನಿಧನರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿಗಳ ನಿಧನಕ್ಕೆ ಶಾಸಕ  ಡಾ. ಶಾಮನೂರು ಶಿವಶಂಕರಪ್ಪನವರು, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸದಾ ಚೈತನ್ಯಶೀಲರಾಗಿ ಸಮಾಜಮುಖಿ ಚಿಂತನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಶ್ರೀಗಳ ಬದುಕು, ಅವರು ಸಮಾಜಕ್ಕೆ ನೀಡಿದ ಸೇವೆ ಎಂದಿಗೂ ಚಿರಸ್ಮರಣೆ. ಶ್ರೀಗಳ ನಿಧನದಿಂದ ಸಮಾಜಕ್ಕೆ ಓರ್ವ ಉತ್ತಮ ಮಾರ್ಗದರ್ಶಕರನ್ನು ಕಳೆದುಕೊಂಡಾಂತಾಗಿದೆ ಎಂದಿರುವ ಶಾಮನೂರು ಶಿವಶಂಕರಪ್ಪನವರು ಕಳೆದ ಜೂನ್ 18ರಂದು ನಮ್ಮ ಮನೆಗೆ ಆಗಮಿಸಿ ನನ್ನ ಜನ್ಮದಿನದ ಶುಭಾಶಯ ಕೋರಿ ಆಯುರಾರೋಗ್ಯದಿಂದ ಇರುವಂತೆ ಆಶೀರ್ವದಿಸಿದ್ದರು ಎಂದು ತಮ್ಮ ಕಂಬನಿ ಮಿಡಿದಿದ್ದಾರೆ.

ವೈಷ್ಣವ-ಶೈವ ಪಂಥವನ್ನು ಒಂದೇ ಎಂಬುದನ್ನು ಪ್ರಚುರಪಡಿಸಿ ಜಗತ್ತಿಗೆ ಹಿಂದೂ ಧರ್ಮ ಒಂದೇ ಎಂದು ಹಿಂದೂ ಧರ್ಮದ ಸುಧಾರಣೆಗೆ ಅವಿರತವಾಗಿ ಪ್ರಯತ್ನಿಸುತ್ತಿದ್ದ ನೇರ-ನುಡಿಯ ಮೂಲಕ ಎಲ್ಲರ ಪ್ರೀತಿ ಪಾತ್ರರಾಗಿದ್ದ ಶ್ರೀಗಳ ನಿಧನದಿಂದ ಅವರ ಭಕ್ತ ವರ್ಗಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ ಎಂದು ಅವರುಗಳು ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News