ಜಗದ ಕತ್ತಲೆ ಅಳಿಯಲಿ: ಹೊಸ ವರ್ಷಕ್ಕೆ ಸಿದ್ದರಾಮಯ್ಯರಿಂದ ಶುಭಾಶಯ

Update: 2020-01-01 16:13 GMT

ಬೆಂಗಳೂರು, ಜ. 1: ‘ಸುಳ್ಳುಗಳನ್ನು ಸತ್ಯದ ಮೂಲಕ, ಅನ್ಯಾಯವನ್ನು ನ್ಯಾಯದ ಮೂಲಕ, ಅಧರ್ಮವನ್ನು ಧರ್ಮದ ಮೂಲಕ ಎದುರಿಸುವ ಶಕ್ತಿಯನ್ನು ಹೊಸವರ್ಷ ನಮ್ಮೆಲ್ಲರಿಗೂ ನೀಡಲಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ.

ಟ್ವಿಟ್ಟರ್ ಮೂಲಕ ಶುಭ ಕೋರಿರುವ ಅವರು, 2020ರ ‘ಹೊಸ ವರ್ಷ ಎಲ್ಲರಿಗೂ ಶುಭವನ್ನು ಹೊತ್ತು ತರಲಿ, ಜಗದ ಕತ್ತಲೆ ಅಳಿಯಲಿ, ಭರವಸೆಯ ಬೆಳಕು ಬೆಳಗಲಿ ಎಂದು ನಾಡಿನ ಸಮಸ್ತ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News