ಹೊಸ ವರ್ಷದ ಆಚರಣೆಗೆ ಹೋದ ಯುವಕ ಶವವಾಗಿ ಪತ್ತೆ

Update: 2020-01-01 17:53 GMT

ಮೈಸೂರು,ಜ.1: ಹೊಸ ವರ್ಷದ ಆಚರಣೆಗೆಂದು ಮಂಗಳವಾರ ರಾತ್ರಿ ಮನೆಯಿಂದ ಹೋಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರು-ನಂಜನಗೂಡು ಮಧ್ಯದಲ್ಲಿರುವ ಕಡಕೊಳ ಬಳಿ ಪತ್ತೆಯಾಗಿದೆ.

ಮೃತ ಯುವಕನನ್ನು ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದ ಕೃಷ್ಣ(22) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಹೊಸ ವರ್ಷದ ಆಚರಣೆಗೆ ಎಂದು ಕೃಷ್ಣ ಮನೆಯಿಂದ ಹೊರಹೋಗಿದ್ದ. ಆದರೆ ಬುಧವಾರ ಬೆಳಗ್ಗೆ ಸ್ಕೂಟರ್ ಮೇಲೆಯೇ ಬಿದ್ದ ರೀತಿಯಲ್ಲಿ ಕೃಷ್ಣನ ಶವ ಪತ್ತೆಯಾಗಿದೆ. ಸುಮಾರು ಒಂದು ಕಿ.ಮಿ ವರೆಗೂ ಕೃಷ್ಣನ ದೇಹವನ್ನು ಎಳೆದುಕೊಂಡು ಬಂದ ರೀತಿಯಲ್ಲಿ ಇದೆ. ಜೊತೆಗೆ ಕೃಷ್ಣನ ಮೈಮೇಲೆ ಗಾಯದ ಗುರುತು ಕಂಡು ಬಂದಿದೆ ಎನ್ನಲಾಗಿದೆ. ಯಾರೋ ನನ್ನ ಮಗನನ್ನು ಕೊಲೆ ಮಾಡಿ ತಂದು ಹಾಕಿದ್ದಾರೆ ಎಂದು ಮೃತನ ಪೋಷಕರು ದೂರು ನೀಡಿದ್ದಾರೆ.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸರು ಮತ್ತು ಮೈಸೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News