2020ರಲ್ಲಿ ನಿವೃತ್ತಿಯಾಗಲಿರುವ ರಾಜ್ಯದ ಐಪಿಎಸ್ ಅಧಿಕಾರಿಗಳೆಷ್ಟು ಗೊತ್ತೇ ?

Update: 2020-01-04 15:58 GMT
ನೀಲಮಣಿ ಎನ್.ರಾಜು

ಬೆಂಗಳೂರು, ಜ.4: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಸೇರಿ ರಾಜ್ಯದ 12 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳು ಪ್ರಸಕ್ತ ವರ್ಷ(2020)ದಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಜನವರಿಯಲ್ಲಿ ರಾಜ್ಯ ಪೊಲೀಸ್ ನಿರ್ದೇಶಕಿ ನೀಲಮಣಿ ಎನ್.ರಾಜು, ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳ ಡಿಜಿಪಿ ಎಂ.ಎನ್.ರೆಡ್ಡಿ, ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಡಿಜಿಪಿ ರಾಘವೇಂದ್ರ ಔರಾದ್ಕರ್, ಗುಪ್ತಚರ ದಳ (ಭದ್ರತೆ) ಡಿಐಜಿಪಿ ಪಿ.ರಾಜೇಂದ್ರ ಪ್ರಸಾದ್, ಮೇ ತಿಂಗಳಲ್ಲಿ ಕಲಬುರಗಿ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜು, ಡಿಸಿಆರ್‌ಇ ಡಿಐಜಿಪಿ ಮಂಜುನಾಥ್ ಅಣ್ಣಗೇರಿ, ಜುಲೈನಲ್ಲಿ ಕಾರಾಗೃಹ ಎಡಿಜಿಪಿ ಎನ್.ಎಸ್.ಮೇಘರಿಕ್, ಡಿಐಜಿಪಿ ಟಿ.ಆರ್.ಸುರೇಶ್ ನಿವೃತ್ತಿಯಾಗಲಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಅಪರಾಧ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿ ಪರಶಿವಮೂರ್ತಿ, ಅಕ್ಟೋಬರ್‌ನಲ್ಲಿ ಆಂತರಿಕ ಭದ್ರತಾ ದಳ ಡಿಜಿಪಿ ಆಶಿಶ್ ಮೋಹನ್ ಪ್ರಸಾದ್, ನೇಮಕಾತಿ ವಿಭಾಗದ ಎಡಿಜಿಪಿ ಟಿ. ಸುನೀಲ್ ಕುಮಾರ್, ಡಿಸೆಂಬರ್‌ನಲ್ಲಿ ಎಡಿಜಿಪಿ ಆರ್.ಪಿ.ಶರ್ಮಾ ನಿವೃತ್ತಿ ಹೊಂದಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News