ಮಂಡ್ಯ: ಮಣ್ಣು ಕುಸಿದು ಯುವಕ ಮೃತ್ಯು

Update: 2020-01-05 18:15 GMT

ಮಂಡ್ಯ, ಜ.5: ಜಮೀನಿನಲ್ಲಿ ಗುಂಡಿ ತೆಗೆಸುವ ವೇಳೆ ಮಣ್ಣು ಕುಸಿದು ಯುವಕ ಮೃತಪಟ್ಟರುವ ಘಟನೆ ಶ್ರೀರಂಗಪಟ್ಟಣದ ಬಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಿ ಹನುಮಂತು ಅವರ ಮಗ ಪವನ್(23) ಮೃತ ಯುವಕ.

ರವಿವಾರ ಸಂಜೆ ತಮ್ಮ ಜಮೀನಿನಲ್ಲಿ ಪೈಪ್ ಲೈನ್ ಮಾಡಿಸಲು ಕಾಲುವೆ ತೆಗೆಸುತ್ತಿದ್ದ ವೇಳೆ ಸುಮಾರು ೨-೩ ಗಾಡಿಯಷ್ಷು ಜೇಡಿಮಣ್ಣು ಪವನ್ ಮೇಲೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿದ್ದವರು ಪವನ್ ಮೇಲೆ ಬಿದ್ದಿದ್ದ ಮಣ್ಣು ಸರಿಸಿ ಮೇಲೆತ್ತಿ ನಂತರ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News