ಮುದ್ದಿನ ಕೋತಿಯ ಸಾವಿನ ಆಘಾತ: ವಿದೇಶ ಪ್ರವಾಸವನ್ನು ಮೊಟಕುಗೊಳಿಸಿದ ಶಾಸಕ ಸಾ.ರಾ.ಮಹೇಶ್

Update: 2020-01-07 09:35 GMT

ಮೈಸೂರು, ಜ.7:  ಮುದ್ದಿನ ಕೋತಿ ವಿದ್ಯುತ್ ಆಘಾತದಿಂದ ಸತ್ತ ಕಾರಣದಿಂದಾಗಿ  ಮಾಜಿ ಸಚಿವ ಮತ್ತು ಜೆಡಿಎಸ್  ಶಾಸಕ  ಸಾ.ರಾ. ಮಹೇಶ್  ಅವರು ಇತ್ತೀಚೆಗೆ  ವಿದೇಶಿ ಪ್ರವಾಸವನ್ನು  ಮೊಟಕುಗೊಳಿಸಿ ತವರಿಗೆ ವಾಪಸಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

 ಮಹೇಶ್ ಅವರು ಸಿಂಗಾಪುರ  ಪ್ರವಾಸದಲ್ಲಿದ್ದರು. ಆಗ  ಅವರ  ಮುದ್ದಿನ ಕೋತಿ ‘ಚಿಂಟು’ ವಿದ್ಯುತ್ ಆಘಾತದಿಂದ   ಸಾವಿಗೀಡಾದ  ಸುದ್ದಿ ತಿಳಿಯಿತು.   ಮಾಜಿ ಸಚಿವ  ಮಹೇಶ್ ಅವರು  ತನ್ನ ಸಿಂಗಾಪುರ ಪ್ರವಾಸವನ್ನು ಮೊಟಕುಗೊಳಿಸಿದರು. ಜನವರಿ 4 ರಂದು ವಾಪಸಾಗಬೇಕಿದ್ದ ಶಾಸಕ ಮಹೇಶ್ ಅವರು ಜನವರಿ 2ರಂದೇ ಊರಿಗೆ ವಾಪಸಾಗಿ  ಕೋತಿಯ ಅಂತ್ಯಕ್ರಿಯೆ ನೆರವೇರಿಸಿದರು ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಮೈಸೂರಿನ ಹೊರವಲಯ ದತ್ತಗಲ್ಲಿಯ ಮಹೇಶ್ ಅವರ ಜಮೀನಿನಲ್ಲಿ  ಹಾದುಹೋಗಿರುವ  ವಿದ್ಯುತ್  ತಂತಿ ಕಡಿದು ಬಿದ್ದಿತ್ತು.   ಮಹೇಶ್ ಅವರು ಸಾಕಿದ್ದ ಮೂರು ವರ್ಷದ ಕೋತಿ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ ಪರಿಣಾಮವಾಗಿ ಅದು ಸ್ಥಳದಲ್ಲೇ ವಿದ್ಯುತ್ ಆಘಾತದಿಂದ ಸತ್ತು ಬಿದ್ದಿದೆ.

ಮೂರು ವರ್ಷಗಳ ಹಿಂದೆ ಎರಡು ತಿಂಗಳ ಕೋತಿ ಮರಿಯನ್ನು ಚುಂಚನಕಟ್ಟೆ ಯಿಂದ ತರಲಾಗಿತ್ತು. ಆ ಕೋತಿಗೆ ಚಿಂಟು ಎಂದು ಮಹೇಶ್ ಹೆಸರಿಟ್ಟಿದ್ದರು. ತನ್ನ ಜಮೀನಿನಲ್ಲಿ ಓಡಾಡಿಕೊಂಡಿದ್ದ ಮುದ್ದಿನ   ಕೋತಿ ಚಿಂಟುವನ್ನು ಮಹೇಶ್ ಮತ್ತು ಅವರ ಮಗ  ಕಾಲೇಜು ವಿದ್ಯಾರ್ಥಿ ಆಳವಾಗಿ  ಹಚ್ಚಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News