ರಸ್ತೆ ಅಪಘಾತ: ಕುಂಬ್ಳೆ ವ್ಯಕ್ತಿ ವಿರಾಜಪೇಟೆಯಲ್ಲಿ ಸಾವು

Update: 2020-01-07 14:20 GMT

ಮಡಿಕೇರಿ ಜ.7 : ರಸ್ತೆ ಅವಘಡದಲ್ಲಿ ಕೇರಳ ಮೂಲದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಪಟ್ಟಣದ ಕೆಎಸ್‍ ಆರ್ ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಕೇರಳದ ಕಾಸರಗೋಡು ಸಮೀಪದ ಕುಂಬ್ಳೆ ನಿವಾಸಿ ರವಿ (36) ಎಂಬವರು ಸಾವನ್ನಪ್ಪಿರುವ ದುರ್ದೈವಿ.

ನಗರದ ಬಂಗಾಳಿ ಬೀದಿಯ ಅಲ್ತಾಫ್ ಎಂಬವರ ಬಳಿ ಕಳೆದ ಕೆಲ ಸಮಯಗಳಿಂದ ಗುಜರಿ ಕೆಲಸ ನಿರ್ವಹಿಸುತ್ತಿದ್ದ ರವಿ, ಮಂಗಳವಾರ  ಬೆಳಗ್ಗೆ ಪತ್ನಿಗೆ ಟೀ ತರಲೆಂದು ಕೆಎಸ್‍ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದ ಹೋಟೆಲ್‍ಗೆ ಆಗಮಿಸಿದ ಸಂದರ್ಭ ಘಟನೆ ಸಂಭವಿಸಿದೆ. ನಗರದಿಂದ ಮಡಿಕೇರಿಯತ್ತ  ತೆರಳುತ್ತಿದ್ದ ಖಾಸಗಿ ಬಸ್‍ನ ಹಿಂಬದಿಯ ಚಕ್ರಕ್ಕೆ ಸಿಲುಕಿಕೊಂಡ ರವಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರು ಅಷ್ಟರಲೆ ಆತ ಕೊನೆಯುಸಿರೆಳೆದಿದ್ದ.

ಮೃತನ ಪತ್ನಿ ಚಂದ್ರ ನೀಡಿದ ದೂರಿನ ಮೇರೆ  ನಗರ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ವೀರಾಜಪೇಟೆ ಉಪವಿಭಾಗದ ಡಿವೈಎಸ್‍ಪಿ ಜಯಕುಮಾರ್, ವೃತ್ತ ನಿರೀಕ್ಷಕರಾದ ಕ್ಯಾತೆಗೌಡ ಮತ್ತು ನಗರ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ ಹಾಗು ಸಿಬ್ಬಂದಿಗಳು ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News