ಒಮಾನ್ ದೊರೆ ನಿಧನ: ರಾಜ್ಯದಲ್ಲಿ ಸೋಮವಾರ ಶೋಕಾಚರಣೆ

Update: 2020-01-12 16:24 GMT

ಬೆಂಗಳೂರು, ಜ. 12: ಒಮಾನ್ ದೇಶದ ದೊರೆ ಖಾಬೂಸ್ ಬಿನ್ ಸೈದ್ ಅವರು ಜ.10ರಂದು ನಿಧನರಾಗಿದ್ದು, ಅಗಲಿದ ದೊರೆಯ ಗೌರವಾರ್ಥ ರಾಜ್ಯದಲ್ಲಿ ನಾಳೆ(ಜ.13, ಸೋಮವಾರ) ಶೋಕಾಚರಣೆ ಘೋಷಿಸಲಾಗಿದೆ.

ನಾಳೆ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಅಲ್ಲದೆ, ನಿಯತವಾಗಿ ರಾಷ್ಟ್ರಧ್ವಜವನ್ನು ಹಾರಿಸಲ್ಪಡುವ ಸರಕಾರದ ಎಲ್ಲ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲೆ ಹಾರಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ವಿದೇಶಿ ಕೋಶ) ಸರಕಾರದ ಅಧೀನ ಕಾರ್ಯದರ್ಶಿ ಜಿ.ಸುಧಾ ರವಿವಾರ ಅಧಿಸೂಚನೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News