ಪೌರತ್ವ ಪರ ರ‍್ಯಾಲಿ ಬಗ್ಗೆ ಪಿಯೂಷ್ ಗೋಯಲ್ ಟ್ವೀಟ್ ಗೆ ಪ್ರಿಯಾ‌ಂಕ್ ಖರ್ಗೆ ತಿರುಗೇಟು

Update: 2020-01-13 18:15 GMT

ಬೆಂಗಳೂರು: ಇತ್ತೀಚಿಗೆ ಕಲಬುರಗಿಯಲ್ಲಿ ಪೌರತ್ವ ಪರ ನಡೆದ ರ‍್ಯಾಲಿ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್, 'ಕಲಬುರಗಿಯಲ್ಲಿ ಪೌರತ್ವದ ಪರ ಜನರ ಸುನಾಮಿ' ಎಂದು ವರ್ಣಿಸಿ ಭಾರತದ ಜನರು ಪೌರತ್ವ ಕಾಯಿದೆಯನ್ನು ಸ್ವಾಗತಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ಪಿಯೂಷ್ ಗೋಯಲ್ ಅವರ ಟ್ವೀಟ್ ಗೆ ತಿರುಗೇಟು ನೀಡಿರುವ ಶಾಸಕರಾದ ಪ್ರಿಯಾಂಕ್ ಖರ್ಗೆ 'ಪಿಯೂಷ್ ಅವರೇ ಈಗ ಕಲಬುರಗಿ ನಿಮ್ಮ ಗಮನ ಸೆಳೆಯಿತು. ಹಾಗೆಯೇ, ಯುಪಿಎ ಅವಧಿಯಲ್ಲಿ ಮಂಜೂರಾದ ಕಲಬುರಗಿ ರೈಲ್ವೇ ವಲಯ ಹಾಗೂ ನಿಮ್ಜ್ ಯೋಜನೆಯ ಸದ್ಯದ ಸ್ಥಿತಿಗತಿಯ ಬಗ್ಗೆಯೂ ಸ್ವಲ್ಪ ಹೇಳುತ್ತೀರಾ" ? ಎಂದು ತಿರುಗೇಟು ನೀಡಿದ್ದಾರೆ.

ಪಿಯೂಷ್‌ ಗೋಯಲ್ ಅವರಲ್ಲದೇ ಕಲಬುರಗಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರಿಗೂ ತಿರುಗೇಟು ನೀಡಿರುವ ಶಾಸಕರು, ಈ ಯೋಜನೆಗಳ ಬಗ್ಗೆ ಈಗಿನ ಕಲಬುರಗಿ ಎಂಪಿ ಅವರಿಗೂ ಮಾಹಿತಿ ಇಲ್ಲವೆಂದು ಕಾಣುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News