ಸಾಲಬಾಧೆ: ರೈತ ಮಹಿಳೆ ಆತ್ಮಹತ್ಯೆ

Update: 2020-01-14 18:19 GMT

ಮಂಡ್ಯ, ಜ.14: ಕೆ.ಆರ್.ಪೇಟೆ ತಾಲೂಕಿನ ಗೋವಿಂದೇಗೌಡನ ಕೊಪ್ಪಲು ಗ್ರಾಮದ ರೈತ ಮಹಿಳೆ ಸಾಲದ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಗ್ರಾಮದ ನಾರಾಯಣಗೌಡರ ಪತ್ನಿ ರತ್ನಮ್ಮ(45) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಎರಡು ಎಕರೆ ಭೂಮಿ ಇದ್ದು ಅದು ಬೀಳು ಬಿದ್ದಿದ್ದು, ಈ ಭೂಮಿಯನ್ನು ರಿಸ್ಟೋರ್ ಮಾಡಿಸಿಕೊಳ್ಳಲು ಹಲವು ಮಹಿಳಾ ಸ್ವಸಹಾಯ ಸಂಘಗಳಲ್ಲಿ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳಿಂದ ಸುಮಾರು 5 ರಿಂದ 6 ಲಕ್ಷ ರೂ.ಗಳ ಸಾಲವನ್ನು ಪಡೆದುಕೊಂಡಿದ್ದರು. 

ಆದರೂ ಭೂಮಿಯ ದಾಖಲೆಗಳು ಅವರ ಕುಟುಂಬದ ಹೆಸರಿಗೆ  ಆಗಿರಲಿಲ್ಲ. ಈ ನಡುವೆ ಸಾಲ ನೀಡಿದ ವಿವಿಧ ಸಂಘಗಳ ಕಂತಿನ ಹಣವನ್ನು ಪಾವತಿಸಲು ತೊಂದರೆಯಾಗಿತ್ತು. ಈ ಕಾರಣದಿಂದ ಮನನೊಂದು ಬೆಳಗ್ಗೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News