ಕೂಡುಮಂಗಳೂರಿನಲ್ಲಿ ಹಸಿ ಗಾಂಜಾ ಹೊಂದಿದ್ದ ವ್ಯಕ್ತಿಯ ಬಂಧನ

Update: 2020-01-16 15:44 GMT

ಮಡಿಕೇರಿ ಜ.16 : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ  ಬಸ್ ತಂಗುದಾಣದಲ್ಲಿ  ಆರು ಕೆ.ಜಿ  ಹಸಿ ಗಾಂಜಾ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬೆಂಡೆಬೆಟ್ಟ ನಿವಾಸಿ ಕರಿಯ ಎಂಬವರ ಪುತ್ರ ಮೋಹನ್ ಎಂದು ಗುರುತಿಸಲಾಗಿದೆ. ಹಸಿ ಗಾಂಜಾವನ್ನು  ಚೀಲದಲ್ಲಿ ಇಟ್ಟುಕೂಂಡು  ಕುಶಾಲನಗರದ ಕಡೆಗೆ ಹೋಗಲು  ಬಸ್ ಕಾಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಕುಶಾಲನಗರ ಪೊಲೀಸರು ದಾಳಿ ನಡೆಸಿ ಆರೋಪಿ ಕರಿಯನನ್ನು ಬಂಧಿಸಿ, ಆತನಿಂದ 6 ಕೆ.ಜಿ ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.    

ಸ್ಧಳಕ್ಕೆ  ಕುಶಾಲನಗರ ಡಿವೈಎಸ್‍ಪಿ.  ಶಶಿಧರ್,   ವೃತ್ತ ನೀರಿಕ್ಷಕ ಮಹೇಶ್  ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ  ನಂದೀಶ್,  ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಾಚರಣೆಯಲ್ಲಿ ಕ್ರೈಂಬ್ರಾಂಚ್  ಸಿಬ್ಬಂದಿಗಳಾದ ದಯಾನಂದ, ಜೋಸೆಫ್, ಲೋಕೇಶ್, ಚಾಲಕ ಗಣೇಶ್ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News