ಕಾರು ಮತ್ತು ಬೈಕ್ ನಡುವೆ ಢಿಕ್ಕಿ; ಯುವಕ ಸಾವು

Update: 2020-01-16 15:47 GMT

ಮಡಿಕೇರಿ, ಜ.16 : ಕಾರು ಮತ್ತು ಬೈಕ್ ನಡುವೆ ಸಂಭವಿಸಿ ಯುವಕನೊಬ್ಬ ಮೃತಪಟ್ಟ ಘಟನೆ ಕೂಡುಮಂಗಳೂರು ಸಮೀಪದ ಕೂಡ್ಲೂರಿನ ಮಾವಿನತೋಪಿನ ಬಳಿ ನಡೆದಿದೆ.

ಮುಳ್ಳುಸೋಗೆಯ ದಿ.ಸ್ವಾಮಿ ಎಂಬವರ ಪುತ್ರ ಎಂ.ಎಸ್.ಅಜಯ್ (22) ಮೃತ ಯುವಕ. ಮುಳ್ಳುಸೋಗೆಯಿಂದ ಕೂಡಿಗೆಯತ್ತ ದ್ವಿಚಕ್ರ ವಾಹನದಲ್ಲಿ  ತೆರಳುತ್ತಿದ್ದ ಸಂದರ್ಭ ಕೂಡಿಗೆ ಕಡೆಯಿಂದ ಬಂದ ಇಂಡಿಗೋ ಕಾರಿಗೆ ಬೈಕ್ ಮುಖಾಮುಖಿ ಢಿಕ್ಕಿಯಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅಜಯ್‍ ರನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆಗೆ ಸ್ಪಂಧಿಸದೆ ಮರತಪಟ್ಟಿದ್ದಾರೆ.

ಮೃತ ಯುವಕ ಕುಶಾಲನಗರದ ಹೋಟೆಲ್ ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕ ಪಿರಿಯಾಪಟ್ಟಣದ ರಮೇಶ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News