ಕೆಎಸ್ಸಾರ್ಟಿಸಿ: ಸುಳ್ಯ, ಪಾವಗಡ, ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ

Update: 2020-01-16 17:56 GMT

ಬೆಂಗಳೂರು, ಜ.16: ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು ಇಂಧನ ಕ್ಷಮತೆಗಾಗಿ ಕೆಎಸ್ಸಾರ್ಟಿಸಿಗೆ ಮೂರು ಘಟಕಗಳಿಗೆ ಅತ್ಯುತ್ತಮ ಘಟಕಗಳ ಪ್ರಶಸ್ತಿ ಹಾಗೂ 50ಸಾವಿರ ರೂ.ನಗದು ಬಹುಮಾನವನ್ನು ನಗರದ ಬಾಲಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಕೆಎಸ್ಸಾರ್ಟಿಸಿ ನಿಗಮದ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳು ಕೆಎಂಪಿಎಲ್‌ನಲ್ಲಿ ಉತ್ತಮ ಸಾಧನೆಯನ್ನು ಮಾಡಿರುವ ಹಿನ್ನೆಲೆಯಲ್ಲಿ ಇಂಧನ ಕ್ಷಮತೆಗಾಗಿ ರಾಜ್ಯ ಮಟ್ಟದ ಅತ್ಯುತ್ತಮ ಘಟಕಗಳ ಪ್ರಶಸ್ತಿ ಹಾಗೂ ತಲಾ 50 ಸಾವಿರ ರೂ. ನಗದು ಬಹುಮಾನ ಪಡೆದಿವೆ.
 ಸಂಸ್ಥೆಗಳ ಇಂಧನ ಕ್ಷಮತೆಯ ಸಾಧನೆಯು ಅಕ್ಟೋಬರ್-2018ರಿಂದ ಸೆಪ್ಟೆಂಬರ್-2019ರ ಅವಧಿಯ ಸಾಧನೆಗಾಗಿ ಕೆಎಸ್ಸಾರ್ಟಿಸಿಯ ಮೂರು ಘಟಕಗಳನ್ನು ಸದರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News