ಆಟ ಆಡುತ್ತಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು

Update: 2020-01-17 17:21 GMT

ದಾವಣಗೆರೆ, ಜ.17: ಆಟ ಆಡುತ್ತಿದ್ದ ಇಬ್ಬರು ಬಾಲಕರು ಕಾಲು ಜಾರಿ ಗೋಕಟ್ಟೆಯಲ್ಲಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹರಪನಹಳ್ಳಿ ತಾಲೂಕಿನ ಮಾಚಿಹಳ್ಳಿ ತಾಂಡದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ತಾಂಡದ ನಿವಾಸಿ ಪಿ.ಪರಮೇಶ ನಾಯ್ಕ ಎಂಬವರ ಮಗ ಧನರಾಜ್ (10) ಆರ್.ಕುಬೇರ್ ನಾಯ್ಕ ಎಂಬವರ ಮಗ ಗಗನ್ (8 ) ಗೋಕಟ್ಟೆಯಲ್ಲಿ ಬಿದ್ದು ಮೃತಪಟ್ಟವರು.

ತಾಂಡದಿಂದ ಕೂಗಳತೆ ದೂರದಲ್ಲಿರುವ ಗೋಕಟ್ಟೆಯ ಬಳಿ ಮೂವರು ಬಾಲಕರು ಆಡುತ್ತಿದ್ದರು. ಆದರೆ, ಕಾಲು ಜಾರಿ ಗೋಕಟ್ಟೆಯಲ್ಲಿ ಈ ಇಬ್ಬರು ಬಾಲಕರು ಬಿದ್ದಿದ್ದಾರೆ. ಈಜಲು ಬಾರದೆ, ಇಬ್ಬರು ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ಇದನ್ನು ಗಮನಿಸಿದ ಜೊತೆಯಲ್ಲಿದ್ದ ಬಾಲಕ ತಾಂಡಕ್ಕೆ ಹೋಗಿ ಜನರನ್ನು ಕರೆ ತರುವ ವೇಳೆಗೆ ಇಬ್ಬರು ಸಂಪೂರ್ಣ ಮುಳುಗಿದ್ದರ ಪರಿಣಾಮ, ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ಮೂಲಗಳು ತಿಳಿಸಿವೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದ ಕುಟುಂಬದ ಸದಸ್ಯರ ರೋಧನೆ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News