ಹಾವು ಕಡಿದು ರೈತ ಮೃತ್ಯು

Update: 2020-01-19 15:05 GMT

ಬಳ್ಳಾರಿ, ಜ.19: ಹಾವು ಕಡಿದು ರೈತರೊಬ್ಬರು ಮೃತಪಟ್ಟಿರುವ ಘಟನೆ, ಕೂಡ್ಲಿಗಿ ತಾಲೂಕಿನ ಬಡೆಲಡಕು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಗ್ರಾಮದ ನಿವಾಸಿ ಸಿದ್ದಪ್ಪ (32) ಮೃತ ರೈತ ಎಂದು ತಿಳಿದುಬಂದಿದೆ.

ಶನಿವಾರ ಸಂಜೆ ಜಮೀನಿನಲ್ಲಿ ಕಡಲೆ ಬೆಳೆಗೆ ನೀರು ಕಟ್ಟುತ್ತಿದ್ದಾಗ ಹಾವು ಕಚ್ಚಿದೆ ಎನ್ನಲಾಗಿದ್ದು, ಕೂಡಲೇ ಚಿಕಿತ್ಸೆಗೆಂದು ಕೂಡ್ಲಿಗಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ರೈತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News