ಸಿಎಎ ಬೆಂಬಲಿಸಿ 10 ಲಕ್ಷ ಮಿಸ್ಡ್ ಕಾಲ್: ಬಿಜೆಪಿ

Update: 2020-01-19 15:21 GMT

ಬೆಂಗಳೂರು, ಜ.19: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಬೆಂಬಲಿಸಿ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಮೊಬೈಲ್ ಸಂಖ್ಯೆಗೆ 10,15,031 ಜನರು ಮಿಸ್ಡ್ ಕಾಲ್ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.

ರವಿವಾರ ನಗರದ ಮಲ್ಲೇಶ್ವಂನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಎ ಕಾಯ್ದೆಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದ್ದು, ಜ.26ರವರೆಗೂ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಅಭಿಯಾನ ಮುಂದುವರೆಸುತ್ತೇವೆ ಎಂದರು.

ನಿಜವಾಗಿಯೂ ತ್ಯಾಗದ ಪಕ್ಷ ಬಿಜೆಪಿಯೇ ಹೊರತು ಕಾಂಗ್ರೆಸಿನದ್ದಲ್ಲ. ಸೈನಿಕರಿಗೆ ನೆಮ್ಮದಿ ತಂದು ಕೊಟ್ಟ ಪಕ್ಷ ಬಿಜೆಪಿ ಆಗಿದೆ. ಅಲ್ಲದೆ, ಕಾಯ್ದೆಯಲ್ಲಿನ ಯಾವುದೇ ಒಂದು ಅಂಶ ಮುಸಲ್ಮಾನರ ವಿರುದ್ಧವಾಗಿಲ್ಲ. ಅವರನ್ನ ಪಾಕಿಸ್ತಾನಕ್ಕೆ, ಬಾಂಗ್ಲಾಕ್ಕೆ ಕಳುಹಿಸಿ ಬಿಡ್ತಾರೆ ಎನ್ನುವ ಸುಳ್ಳನ್ನು ಕಾಂಗ್ರೆಸ್ ಹೇಳುತ್ತಿದೆ. ಆದ್ದರಿಂದ ಕಾಂಗ್ರೆಸ್ ಅಪಪ್ರಚಾರದ ಪಕ್ಷ ಎಂದು ಟೀಕಿಸಿದರು.

ಈವರೆಗೆ ಬಿಜೆಪಿ ಸಿಎಎ ಬಗ್ಗೆ 61 ಚಿಂತನಾ ಸಭೆ ನಡೆಸಿದೆ. ಇದರಲ್ಲಿ 24 ಸಾವಿರ ಜನ ಪಾಲ್ಗೊಂಡಿದ್ದರು. ಮನೆ ಮನೆ ಸಂಪರ್ಕ ಆರಂಭಿಸಿದ್ದು, 20 ಲಕ್ಷ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದು, 1 ಕೋಟಿ ಜನರನ್ನು ಭೇಟಿಯ ಉದ್ದೇಶ ಹೊಂದಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News