ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಜಿಸಿಸಿ) ಪದಾಧಿಕಾರಿಗಳ ಆಯ್ಕೆ
ಮಡಿಕೇರಿ: ಕಳೆದ ಹಲವಾರು ವರ್ಷಗಳಿಂದ ಭಾರತ, ಸೌದಿ ಅರೇಬಿಯಾ ಸೇರಿ ಅರಬ್ ರಾಷ್ಟ್ರ ಹಾಗೂ ವಿವಿಧೆಡೆಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿ, ಬಡವರಿಗೆ ಸಹಾಯ ಮಾಡುತ್ತಾ ಬಂದಿರುವ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಜಿಸಿಸಿ) ಕಮಿಟಿ ಇದರ ನೂತನ ಅಧ್ಯಕ್ಷರಾಗಿ ಆಲಿ ಮುಸ್ಲಿಯಾರ್ ಬೆಹರೈನ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ಕಂಡಕರೆ, ಕೋಶಾಧಿಕಾರಿಯಾಗಿ ಅಬೂಬಕರ್ ಹಾಜಿ ಕೊಟ್ಟಮುಡಿ ಇವರನ್ನು ಕೊಂಡಂಗೇರಿಯಲ್ಲಿ ನಡೆದ ಮುಸ್ಲಿಂ ಜಮಾಹತ್ ಸಭೆಯಲ್ಲಿ ಜಿಲ್ಲಾ ಸಹಾಯಕ ಖಾಝಿ ಮಹ್ಮೂದ್ ಮುಸ್ಲಿಯಾರ್, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಜಿಸಿಸಿ) ಇದರ ನೂತನ ಕಮಿಟಿಯನ್ನು ಘೋಷಣೆ ಮಾಡಿದರು.
ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಅಯ್ಯಂಗೇರಿ, ಸಂಯೋಜಕರಾಗಿ ಸಿದ್ದೀಕ್ ಝುಹ್ರಿ, ದಅ್'ವಾ ವಿಭಾಗದ ಅಧ್ಯಕ್ಷರಾಗಿ ಹಂಝ ಉಸ್ತಾದ್, ಕಾರ್ಯದರ್ಶಿಯಾಗಿ ಹನೀಫ್ ಕೆ.ಎ, ಸ್ವಾಂತನ ವಿಭಾಗದ ಅಧ್ಯಕ್ಷರಾಗಿ ಮಜೀದ್ ಮಾದಾಪುರ, ಕಾರ್ಯದರ್ಶಿಯಾಗಿ ಹಾರಿಸ್ ಉಸ್ತಾದ್ ಕೊಳಕೇರಿ ಆಯ್ಕೆಯಾಗಿದ್ದಾರೆ.