ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸಿಗೆ ಬೆಂಕಿ: 30 ಪ್ರಯಾಣಿಕರು ಪಾರು

Update: 2020-01-21 16:47 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ಜ. 21: ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಟೋಲ್ ಗೇಟ್ ಸಮೀಪ ಬೆಂಗಳೂರಿಗೆ ತೆರಳುತ್ತಿದ್ದ ಎನ್‌ಡಬ್ಲು ಕೆಆರ್‌ಟಿಸಿ ಬಸ್ಸೊಂದಕ್ಕೆ ಬೆಂಕಿ ಹತ್ತಿಕೊಂಡಿದ್ದು, 30ಕ್ಕೂ ಅಧಿಕ ಜನರು ಅಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿ ಡಿಪೊದಿಂದ ಸಂಜೆ 8 ಗಂಟೆಗೆ ಬೆಂಗಳೂರಿಗೆ ಸಂಚಾರ ಆರಂಭಿಸಿದ ಎ.ಸಿ. ಸ್ಲೀಪರ್ ಕೋಚ್ ಬಸ್ಸಿಗೆ ಸೋಮವಾರ 4 ಗಂಟೆಗೆ ಬೆಂಕಿ ಹತ್ತಿಕೊಂಡಿತು. ಕೂಡಲೇ 30ಕ್ಕೂ ಅಧಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ಬಸ್ಸಿನಿಂದ ಹೊಗೆ ಬರುತ್ತಿರುವುದನ್ನು ಚಾಲಕ ಹಾಗೂ ನಿವಾರ್ಹಕರು ಗಮನಿಸಿದರು. ಕೂಡಲೆ ಬಸ್ಸಿನಿಂದ ಕೆಳಗೆ ಇಳಿಯುವಂತೆ ಪ್ರಯಾಣಿಕರಿಗೆ ಅವರು ಸೂಚಿಸಿದರು ಎಂದು ಬೆಳಗಾವಿ ವಲಯದ ವಿಭಾಗೀಯ ನಿಯಂತ್ರಕ ಮಹಾದೇವ್ ಮಂಜಿ ಹೇಳಿದ್ದಾರೆ.

ಆರಂಭದಲ್ಲಿ ಬಸ್ಸಿನ ಇಂಜಿನ್‌ಗೆ ಬೆಂಕಿ ಹತ್ತಿಕೊಂಡಿತು. ಮುಂದೆ ಹೋಗಿ ನಿಲ್ಲಿಸುವಂತೆ ಟೋಲ್ ಅಧಿಕಾರಿಗಳು ಚಾಲಕನಿಗೆ ಸೂಚಿಸಿದ್ದರು. ಅನಂತರ ಬೆಂಕಿ ಇಡೀ ಬಸ್ಸನ್ನು ಆವರಿಸಿಕೊಂಡಿತು ಮಂಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News