ವ್ಯಾಪಾರಿಯ ಕತ್ತು ಸೀಳಿ ಹತ್ಯೆ
Update: 2020-01-21 18:00 GMT
ಮಂಡ್ಯ, ಜ.21: ರಾಜಸ್ಥಾನ ಮೂಲದ ವ್ಯಾಪಾರಿಯನ್ನು ಕತ್ತು ಸೀಳಿ ಕೊಲೆಗೈದಿರುವ ಘಟನೆ ಸೋಮವಾರ ತಡರಾತ್ರಿ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.
ಬುಂಡಾರಾಂ(27) ಹತ್ಯೆಯಾದ ವ್ಯಾಪಾರಿ. ಈತ ನಗರದ ಗುತ್ತಲು ರಸ್ತೆಯಲ್ಲಿ ಹಾರ್ಡ್ವೇರ್ ಅಂಗಡಿ ವ್ಯಾಪಾರಿಯಾಗಿದ್ದು, ಆತ ವಾಸವಿರುವ ವಿದ್ಯಾನಗರದ ಮನೆಯಲ್ಲಿ ಕೃತ್ಯ ಸಂಭವಿಸಿದೆ.
ತಡರಾತ್ರಿ ಮನೆಗೆ ಬಂದ ನಾಲ್ವರು ದುಷ್ಕರ್ಮಿಗಳು ಬುಂಡಾರಾಂ ಪತ್ನಿ, ಮಕ್ಕಳನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಬುಂಡಾರಾಂನನ್ನು ಹತ್ಯೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಹಾಸನದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಿಯಕರನ ಜತೆ ಸೇರಿ ಪತ್ನಿಯೇ ಬುಂಡಾರಾಂ ಹತ್ಯೆಗೆ ಸುಫಾರಿ ಕೊಟ್ಟಿದ್ದಳೆಂದು ಆರೋಪಿಸಲಾಗಿದೆ. ಆದರೆ ತನಿಖೆಯ ನಂತರವಷ್ಟೇ ಸತ್ಯಾಂಶ ತಿಳಿದುಬರಬೇಕಿದೆ.