ಬೆಂಗರೆ: ದೋಣಿಯಲ್ಲಿ ಮೊಳಗಿದ ಆಝಾದಿ ಧ್ವನಿ

Update: 2020-01-21 18:21 GMT

ಸಂವಿಧಾನ ಸಂರಕ್ಷಣಾ ಸಮಿತಿ ಕಸಬಾ ಬೆಂಗರೆ ಇದರ ವತಿಯಿಂದ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ಬೆಂಗರೆಯ ಫುಟ್ಬಾಲ್ ಗ್ರೌಂಡ್‌ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಉಳ್ಳಾಲ ಕೋಟಪುರದಿಂದ ಕಸಬಾ ಬೆಂಗರೆಗೆ ‘ಚಲೋ’ ನಡೆಯಿತು. ಉಳ್ಳಾಲ ಕೋಟೆಪುರ ಮೀನುಗಾರರ ಸಂಘದ ವತಿಯಿಂದ ಉಳ್ಳಾಲ ಕೋಟೆಪುರದಿಂದ ಕಸಬಾ ಬೆಂಗರೆಯಲ್ಲಿ ನಡೆಯುವ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗೆ ಸುಮಾರು 60ಕ್ಕೂ ಅಧಿಕ ದೋಣಿಯ ಮೂಲಕ ಸಾವಿರಾರು ಪ್ರತಿಭಟನಾಕಾರರು ಆಗಮಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ಆಝಾದಿ ಧ್ವನಿ ಮೊಳಗಿಸಿದರು. ಕೋಟೆಪುರ ಜುಮಾ ಮಸೀದಿಯ ಯು.ಕೆ. ಅಬ್ಬಾಸ್, ಉಳ್ಳಾಲ ಕೋಡಿ ಮಸೀದಿಯ ಅಬ್ದುಲ್ ಹಮೀದ್, ನಾಡದೋಣಿ ಸಂಘಟನೆಯ ಅಧ್ಯಕ್ಷ ಹನೀಫ್ ಮತ್ತಿತರರು ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor