ಝಮೀರ್, ಯು.ಟಿ.ಖಾದರ್ ದೇಶದ್ರೋಹಿಗಳು: ಮಾಜಿ ಸಚಿವ ರೇಣುಕಾಚಾರ್ಯ

Update: 2020-01-22 17:57 GMT

ಬೆಂಗಳೂರು, ಜ.22: ಆರೆಸ್ಸೆಸ್ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು. ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಕುರಿತು ಮಾತನಾಡಿರುವ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್, ಯು.ಟಿ.ಖಾದರ್ ದೇಶದ್ರೋಹಿಗಳು. ಆರೆಸ್ಸೆಸ್ ಬಗ್ಗೆ ಇನ್ನೊಂದು ಸಾರಿ ಮಾತನಾಡಕೂಡದೆಂದು ಎಚ್ಚರಿಕೆ ನೀಡುತ್ತಿದ್ದೇನೆಂದು ತಿಳಿಸಿದರು.

ಝಮೀರ್ ಅಹ್ಮದ್ ಖಾನ್ ಮಾಲಕತ್ವದ ನ್ಯಾಷನಲ್ ಟ್ರಾವೆಲ್ಸ್ ಬಸ್‌ನಲ್ಲಿ ಬಂದೂಕುಗಳು ಸಿಕ್ಕಿದ್ದವು. ಅದು ದೇಶದ್ರೋಹವಲ್ಲವೆ. ಹಾಗೆಯೇ ಜೆಡಿಎಸ್ ಕಾರ್ಯಕರ್ತನ ಮೇಲೆ ಮಂಡ್ಯ ಜಿಲ್ಲೆಯಲ್ಲಿ ದೌರ್ಜನ್ಯ ನಡೆದಾಗ ಎಚ್.ಡಿ. ಕುಮಾರಸ್ವಾಮಿ, ಮಂಡ್ಯ ಎಸ್ಪಿಗೆ ಶೂಟ್ ಮಾಡಿ ಅಂತ ಹೇಳಿರಲಿಲ್ಲವೇ. ನಿಮ್ಮ ರಕ್ಷಣೆಗೆ ಪೊಲೀಸರು ಬೇಕು. ಈಗ ಮಂಗಳೂರು ಘಟನೆ ಕುರಿತು ಪೊಲೀಸರ ನೈತಿಕತೆ ಕುಗ್ಗಿಸುವ ಮಾತುಗಳನ್ನು ಯಾಕೆ ಆಡುತ್ತಿದ್ದೀರಿ ಎಂದು ಅವರು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News