ನೇಣು ಬಿಗಿದ ಸ್ಥಿತಿಯಲ್ಲಿ ಕೊಡಗಿನ ಯೋಧನ ಮೃತದೇಹ ಪತ್ತೆ

Update: 2020-01-23 16:31 GMT

ಮಡಿಕೇರಿ, ಜ.23: ಭಾರತೀಯ ಸೇನೆಯಲ್ಲಿ ತರಬೇತಿ ಪಡೆಯುತ್ತಿದ್ದ ಕೊಡಗಿನ ಯುವಕನೊಬ್ಬನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪುಣೆಯ ವಸತಿಗೃಹದಲ್ಲಿ ಗುರುವಾರ ಪತ್ತೆಯಾಗಿದೆ.

ಪೊನ್ನಂಪೇಟೆ ಸಮೀಪ ಮುಗುಟಗೇರಿ ಗ್ರಾಮದ ಯೋಧ ಚೀರಂಡ ರಚನ್ ಬೋಪಣ್ಣ (22) ಮೃತ ಯುವಕನಾಗಿದ್ದು, 2019ರ ಏಪ್ರಿಲ್ ತಿಂಗಳಲ್ಲಿ ಇವರು ಸೇನೆಗೆ ಸೇರ್ಪಡೆಯಾಗಿದ್ದರು. ಮೃತದೇಹದ ಬಳಿ ಡೆತ್ ನೋಟ್ ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಯೋಧನ ಕುಟುಂಬದ ಸದಸ್ಯರು ತೆರಳಿದ್ದಾರೆ.

ತರಬೇತಿಯ ಕೊನೆಯ ಹಂತದಲ್ಲಿದ್ದ ರಚನ್ ಬೋಪಣ್ಣ ಅವರು, ಭಾನುವಾರ ಔಟ್‍ಪಾಸ್ ಪಡೆದು ಶಿಬಿರದಿಂದ ಹೊರ ಹೋಗಿದ್ದರು ಎಂದು ತಿಳಿದು ಬಂದಿದೆ. ಯೋಧ ಕಳೆದ ನವೆಂಬರ್ ತಿಂಗಳಿನಲ್ಲಿ ರಜೆಯಲ್ಲಿ ಮನೆಗೆ ಬಂದು ತೆರಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News