ಒಂದೇ ಒಂದು ಮಸೀದಿಯಲ್ಲಿ ಆಯುಧ ತೋರಿಸಲಿ: ರೇಣುಕಾಚಾರ್ಯಗೆ ಅಬ್ದುಲ್ ಮಜೀದ್ ಸವಾಲು

Update: 2020-01-24 17:21 GMT

ಮೈಸೂರು: ಮಸೀದಿಗಳಲ್ಲಿ ಅಯುಧಗಳನ್ನು ಇಡಲಾಗಿದೆ ಎಂಬ ಹೇಳಿಕೆ ನೀಡಿರುವ ಶಾಸಕ ರೇಣುಕಾಚಾರ್ಯ ಒಂದೇ ಒಂದು ಮಸೀದಿಯಲ್ಲಿ ಆಯುಧ ಇರುವುದನ್ನು ಸಾಬೀತು ಪಡಿಸಲಿ ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕ ರೇಣುಕಾಚಾರ್ಯ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಅವರ ಇತ್ತೀಚಿನ ಹೇಳಿಕೆಗಳು ಒಂದು ಸಮುದಾಯದ ವಿರುದ್ಧ ಇದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಬೇಕಿತ್ತು. ಆದರೆ ಅಂತಹ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಬ್ಬ ಜವಾಬ್ದಾರಿಯುತ ಶಾಸಕರಾಗಿ ರೇಣುಕಾಚಾರ್ಯ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು, ಆದರೆ ಅವರು ಒಂದು ಸಮುದಾಯವನ್ನು ಉದ್ದೇಶಪೂರ್ವಕವಾಗಿಟ್ಟುಕೊಂಡು ಮಾತನಾಡುತಿದ್ದಾರೆ. ಈ ಸಂಬಂಧ ಎಸ್‍ಡಿಪಿಐ ಪಕ್ಷದ ವತಿಯಿಂದು ದೂರು ಕೊಡಲಾಗಿದೆ. ಇದಕ್ಕು ಮೊದಲು ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ ಸ್ವಯಂ ದೂರು ದಾಖಲಿಸಿಕೊಳ್ಳಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News