85ನೇ ಕನ್ನಡ 'ಸಾಹಿತ್ಯೆ' ಸಮ್ಮೇಳನ: ಗೋಡೆ ಬರಹದಲ್ಲಿ ಎಡವಟ್ಟು !

Update: 2020-01-27 17:38 GMT

ಕಲಬುರಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಕಟ್ಟಡ ಹಾಗೂ ಕಾಂಪೌಂಡ್ ಗಳಿಗೆ ಬರೆದ ಗೋಡೆ ಬರಹಗಳಲ್ಲಿ ಎಡವಟ್ಟು ಸಂಭವಿಸಿದ್ದು, ಫೋಟೋ ವೈರಲ್ ಆಗುತ್ತಿದೆ.

ಪೆಬ್ರವರಿ 5,6 ಮತ್ತು 7ರಂದು ಕಲಬುರಗಿಯ ಗುಲ್ಬರ್ಗ ವಿವಿ ಆವರಣದಲ್ಲಿ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆ ಕೆಲ ಕಟ್ಟಡಗಳ ಮೇಲೆ 'ಗೋಡೆ ಬರಹ' ಬರೆದು ಪ್ರಚಾರ ಮಾಡಲಾಗುತ್ತಿದೆ. ಆದರೆ ಅದರಲ್ಲಿ ಒಂದು ಕಡೆ ಬರೆದ ಬರಹದಲ್ಲಿ ಎಡವಟ್ಟು ಸಂಭವಿಸಿದ್ದು, 'ಸಾಹಿತ್ಯ' ಎಂದು ಬರೆಯುವ ಬದಲು 'ಸಾಹಿತ್ಯೆ' ಎಂದು ಬರೆಯಲಾಗಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪದಾಧಿಕಾರಿಯೊಬ್ಬರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಎಡವಟ್ಟಿನ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅಲ್ಲದೇ, ಈ ಫೋಟೋ ವೈರಲ್ ಆಗುತ್ತಿದ್ದು, ಬರಹವು ಸಾಹಿತ್ಯಾಸಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News