ಮೈಸೂರು ಅರಮನೆಯ ಉಸ್ತಾದ್ ತಿಲಕ್ ಜೆಟ್ಟಿ ನಿಧನ

Update: 2020-01-29 18:18 GMT

ಮೈಸೂರು,ಜ.29: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಅರಮನೆ ಉಸ್ತಾದ್ ತಿಲಕ್‍ ಜೆಟ್ಟಿ (56) ಇಂದು ಬೆಳಗಿನ ಜಾವ ಅವರ ನಿವಾಸ ವಿದ್ಯಾರಣ್ಯಪುರಂ ನಲ್ಲಿ ನಿಧನರಾಗಿದ್ದಾರೆ.

ವಜ್ರಮುಷ್ಠಿ ಕಾಳಗದಲ್ಲಿ ಸೆಣಸಿದ್ದ ಉಸ್ತಾದ್ ತಿಲಕ್ ಜೆಟ್ಟಿ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಸೂರಿನ ನಜರ್ ಬಾದ್ ನಲ್ಲಿರುವ ನಿಂಬುಜಾದೇವಿ ದೇವಾಲಯದಲ್ಲಿ ವ್ಯವಸ್ಥಾಪರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ನರೆವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News