ತೀರ್ಥಹಳ್ಳಿ: ಫೆ.4ರಂದು ಅಹಿಂದ ಸಮಿತಿಯಿಂದ ಸಿಎಎ, ಎನ್ಆರ್ ಸಿ, ಎನ್ ಪಿಆರ್ ವಿರುದ್ಧ ಬೃಹತ್ ಪ್ರತಿಭಟನೆ

Update: 2020-02-01 17:26 GMT
ಸಾಂದರ್ಭಿಕ ಚಿತ್ರ

ಮಂಗಳೂರು: ಅಲ್ಪಸಂಖ್ಯಾತ ಹಿಂದುಳಿತ ದಲಿತ ಸಮಿತಿ ತೀರ್ಥಹಳ್ಳಿ ಇದರ ಆಶ್ರಯದಲ್ಲಿ ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯು ಫೆಬ್ರವರಿ 4ರಂದು ತೀರ್ಥಹಳ್ಳಿಯ ಎ.ಪಿ.ಎಂ.ಸಿ. ಎದುರಿನ ಆವರಣದಲ್ಲಿ ನಡೆಯಲಿದೆ.

ರೈತ ಹೋರಾಟಗಾರ ಕಡಿದಾಳು ಶಾಮಣ್ಣ ಬಹಿರಂಗ ಸಭೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಮಹೇಂದ್ರ ಕುಮಾರ, ಪ್ರೊ. ರಾಜೇಂದ್ರ ಜೆನ್ನಿ, ಸತ್ಯ, ಶಾಹುಲ್ ಹಮೀದ್ ಮುಸ್ಲಿಯಾರ್, ಜೀನಾ ವಿಕ್ಟರ್ ಭಾಗವಹಿಸಲಿದ್ದಾರೆ ಎಂದು ಕಡಿದಾಳು ದಯಾನಂದ್, ನೆಂಪೆ ದೇವರಾಜ್ ಮತ್ತು ರಹ್ಮತುಲ್ಲಾ ಅಸ್ಸಾದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News