'ಆಪರೇಷನ್ ಕಮಲ ಪುಸ್ತಕ': ಎಚ್.ವಿಶ್ವನಾಥ್ ಗೆ ಸಿದ್ದರಾಮಯ್ಯ ನೀಡಿದ ಸಲಹೆ ಏನು ?

Update: 2020-02-01 17:36 GMT

ಮೈಸೂರು,ಫೆ.1: ಆಪರೇಷನ್ ಕಮಲದ ಪುಸ್ತಕ ಬರೆಯಲು ಮುಂದಾಗಿರುವ ಮಾಜಿ ಎಚ್.ವಿಶ್ವನಾಥ್ ಯಾರ್ಯಾರಿಗೆ ಎಷ್ಟೆಷ್ಟು ಹಣ ನೀಡಲಾಗಿದೆ ಎಂಬುದನ್ನು ದಾಖಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದ ವೇಳೆ ವಿಶ್ವನಾಥ್ ಆಪರೇಷನ್ ಕಮಲದ ಪುಸ್ತಕ ಬರೆಯುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಕಮಲದಲ್ಲಿ ಯಾರ್ಯಾರು ಎಷ್ಟೆಷ್ಟು ಹಣ ಪಡೆದಿದ್ದಾರೆ ಎಂಬುದನ್ನು ದಾಖಲಿಸಲಿ. ವಿಶ್ವನಾಥ್ ದೊಡ್ಡ ಬರಹಗಾರ. ಹಾಗಾಗಿ ಅಪರೇಷನ್ ಕಮಲದ ಪುಸ್ತಕ ಬರೆಯುತ್ತಿದ್ದಾರೆ, ಬರೆಯಲಿ ಬಿಡಿ ಎಂದು ವ್ಯಂಗ್ಯವಾಡಿದರು.

ಮೊದಲು ನಾನು ಸರಿಯಾಗಿ ಇದ್ದೇನಾ ಎಂಬುದನ್ನು ನೋಡಬೇಕು, ಇವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅಂತಹದರಲ್ಲಿ ಬೇರೆಯವರ ತಟ್ಟೆಯಲ್ಲಿ ಬಿದ್ದಿರುವ ನೊಣದ ಬಗ್ಗೆ ಮಾತನಾಡುತ್ತಾರೆ. ಪಕ್ಷದ್ರೋಹ ಮಾಡಿದವರಿಗೆ ಇದೇ ಪರಿಸ್ಥಿತಿ ಬರುವುದು ಎಂದು ಹೇಳಿದರು.

ಮಂತ್ರಿ ಸ್ಥಾನ ಸಿಗುತ್ತದೆ ಎಂದು ಪಕ್ಷದ್ರೋಹ ಮಾಡಿದವರು ಇಂದು ಅತಂತ್ರರಾಗಿದ್ದಾರೆ. ಇವರಿಗೆ ಯಾವ ಸ್ಥಾನವನ್ನೂ ನೀಡುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News