ಸಿದ್ದಾಪುರ: ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

Update: 2020-02-08 07:35 GMT

ಸಿದ್ದಾಪುರ (ಕೊಡಗು), ಫೆ.8: ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರ ಸಾವನ್ನಪ್ಪಿರುವ ಘಟನೆ ದಡವಾಗಿ ಬೆಳಕಿಗೆ ಬಂದಿದೆ. ಅವರೆಗುಂದ‌ ಗ್ರಾಮದ ಪೆಮ್ಮಯ್ಯ (69) ಮೃತಪಟ್ಟವರು.

ಶುಕ್ರವಾರ ಬೆಳಗ್ಗೆ ಮನೆಯಿಂದ ಪಟ್ಟಣಕ್ಕೆ ತೆರಳಿದ ಪೆಮ್ಮಯ್ಯ ಹಿಂದಿರುಗಿ ಬಾರದ ಹಿನ್ನಲೆ ಮನೆಯವರು ಹುಡುಕಾಡಿದ ಸಂದರ್ಭ ಅವರೆಗುಂದ ಗ್ರಾಮದ ಅಸ್ತಾನ ಹಾಡಿಯಲ್ಲಿ ಶನಿವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಅವರು ಕಾಡಾನೆ ದಾಳಿಗೆ ಒಳಗಾಗಿರುವುದಾಗಿ ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಕುಶಾಲ ನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಸಿದ್ದಾಪುರ ಪಿ.ಎಸ್.ಐ ಬೋಜಪ್ಪ ಭೇಟಿ ನೀಡಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News